Posts

Showing posts with the label #SanskritTexts

ಮನೀಷ ಪಂಚಕಂ

ಮನೀಷ ಪಂಚಕವನ್ನು ಬರೆದವರು ಜಗದ್ಗುರು ಆದಿ ಶಂಕರಾಚಾರ್ಯರು.  ಶ್ರೀ ಶಂಕರರು ತಮ್ಮ ಬ್ರಹ್ಮ ಸೂತ್ರದ ವ್ಯಾಖ್ಯಾನ (ಭಾಷ್ಯ)ದಲ್ಲಿ ವೇದಗಳ ಪಠಣವನ್ನು ಮೇಲ್ಜಾತಿಗಳಿಗೆ ಮಾತ್ರ ಸೀಮಿತಗೊಳಿಸಿದ್ದಾರೆ ಎಂದು ಜಾತೀವಾದವನ್ನು ಪ್ರತಿಪಾದಿಸಿದ್ದಕ್ಕಾಗಿ ಪಾಶ್ಚಿಮಾತ್ಯ ವಿದ್ವಾಂಸರು ಅವರನ್ನು ಟೀಕಿಸುತ್ತಾದರೆ. ಆದಾರೂ ಭಾಷ್ಯ ಬರೆಯುವವರು, ಒಂದು ಪಠ್ಯಕ್ಕೆ ವ್ಯಾಖ್ಯಾನ ಬರೆಯುವಾಗ ಅದರ ಮೂಲ ಅರ್ಥಕ್ಕೆ ಸೀಮಿತರಾಗಿರಬೇಕಾಗುತ್ತದೆ ಎಂಬುದನ್ನು ಗಮನಿಸಬೇಕು.  ಉಪದೇಶಸಹಸ್ರಿ ಮತ್ತು ಸಣ್ಣ ಕೃತಿಯಾದ ಈ ಮನೀಶ ಪಂಚಕದಂತಹ ಸ್ವತಂತ್ರ ರಚನೆಗಳಲ್ಲಿ ಅವರು ತಮ್ಮ ಅದ್ವೈತ ಸಿದ್ಧಾಂತವನ್ನು ಸಕಲ ವೈಭವದೊಂದಿಗೆ ವಿವರಿಸುತ್ತಾರೆ. ಅದ್ವೈತ ಸಿದ್ಧಾಂತವು ಜಾತಿ, ಮತ, ಧರ್ಮ, ಲಿಂಗಗಳ  ವ್ಯತ್ಯಾಸಗಳನ್ನು ಗುರುತಿಸುವುದಿಲ್ಲ - ಏಕೆಂದರೆ ನಾವೆಲ್ಲರೂ ಒಬ್ಬನೇ ಬ್ರಹ್ಮನ ಬೇರೆ ಬೇರೆ ರೂಪಗಳು. ಈ ಕೃತಿಯ ಸನ್ನಿವೇಶವು ಭಾರತದ ಪವಿತ್ರ ಕ್ಷೇತ್ರವಾದ ವಾರಣಾಸಿಯಲ್ಲಿ  ನಡೆದಿದೆ. ಅದ್ವೈತ ಶಾಸ್ತ್ರದ ಪ್ರತಿಪಾದಕರಾದ ಆದಿ ಶಂಕರಾಚಾರ್ಯರು ಸ್ನಾನ ಮುಗಿಸಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಇದ್ದಕ್ಕಿದ್ದಂತೆ ದಾರಿಯಲ್ಲಿ ಒಬ್ಬ ಚಂಡಾಲನನ್ನು ನೋಡಿ, ಆ ದಿನಗಳಲ್ಲಿನ  ಪದ್ಧತಿಯ ಪ್ರಕಾರ ದೂರವನ್ನು ಕಾಯ್ದುಕೊಳ್ಳಲು ಸನ್ನೆ ಮಾಡಿದರು. ಆ ಚಂಡಾಲ ಭಗವಾನ್ ಶಂಕರ(ಶಿವ)ನೇ ಹೊರತು ಬೇರಾರೂ ಅಲ್ಲ! ಹಾಗೆ ಸನ್ನೆ ಮಾಡಿದಾಗ, ಶಿವನು ತನ್ನ ಭಕ್ತ ಶಂಕಾರಾಚ...

ತತ್ತ್ವಬೋಧ

Image
ತತ್ವಬೋಧ ಒಂದು ಸಂಸ್ಕ್ರತ ಪ್ರಕರಣ ಗ್ರಂ ಥ. ( ಪ್ರಕರಣ ಗ್ರಂಥವೆಂದರೆ ಪರಿಚಯಿಸುವ, ಪ್ರಾರಂಭಿಕ ಗ್ರಂಥ). ಆದಿಶಂಕರಾಚಾರ್ಯರಿಂದ ರಚಿತವಾಗಿರಬಹುದಾದ ಇದು ಗದ್ಯ ರೂಪದಲ್ಲಿದೆ. ತತ್ವಬೋಧವು ವೇದಾಂತದ ತತ್ವಗಳನ್ನು ಅತಿ ಸಂಕ್ಷಿಪ್ತವಾಗಿ ಸಂಭಾಷಣೆಯ ರೂಪದಲ್ಲಿ ಹೇಳುತ್ತದೆ. ಅಧ್ಯಾತ್ಮದ ಮುಖ್ಯ ಪದಗಳ ಅರ್ಥ ವಿವರಿಸುತ್ತದೆ. ಇದು 38 ಮುಖ್ಯ ಭಾಗಗಳನ್ನು ಹೊಂದಿ, ಒಟ್ಟು 103 ಪಂಕ್ತಿಗಳನ್ನು ಹೊಂದಿದೆ. ಇವುಗಳನ್ನು  ಐದು ವಿಭಾಗಗಳಲ್ಲಿ ಜೋಡಿಸಲಾಗಿದೆ: ಉಪೋದ್ಘಾತ (ಪರಿಚಯ) ಜೀವ ವಿಚಾರ ಆತ್ಮ ವಿಚಾರ ಸೃಷ್ಟಿ ವಿಚಾರ ಜೀವ ಈಶ್ವರ ವಿಚಾರ ಜ್ಞಾನಫಲ ಪ್ರಥಮ ಹಾಗೂ ಅಂತಿಮ ವಾಕ್ಯಗಳು ಮಾತ್ರ ಶ್ಲೋಕ ರೂಪದಲ್ಲಿವೆ. ಉಳಿದೆಲ್ಲ ಸಾಲುಗಳ ಗದ್ಯ ರೂಪದಲ್ಲಿವೆ. ಶ್ರೀಶಂಕರಭಗವತ್ಪಾದಾಚಾರ್ಯಪ್ರಣೀತಃ ಮಂಗಲಾಚರಣ   ವಾಸುದೇವೇಂದ್ರಯೋಗೀಂದ್ರಂ ನತ್ವಾ ಜ್ಞಾನಪ್ರದಂ ಗುರುಂ . ಮುಮುಕ್ಷೂಣಾಂ ಹಿತಾರ್ಥಾಯ ತತ್ತ್ವಬೋಧೋಭಿಧೀಯತೇ .. ಯೋಗಿಯರಲ್ಲಿ ಶ್ರೇಷ್ಠನಾದ, ಜ್ಞಾನವನ್ನು ನೀಡುವ ಆಧ್ಯಾತ್ಮಿಕ ಗುರು, ಭಗವಾನ್ ವಾಸುದೇವನಿಗೆ ನಾನು ನಮಸ್ಕರಿಸುತ್ತೇನೆ. ಮುಮುಕ್ಷುಗಳ (ಮುಕ್ತಿ ಬಯಸುವವರ) ಹಿತಾರ್ಥಕ್ಕಾಗಿ, ತತ್ವಬೋಧವನ್ನು ವಿವರಿಸಲಾಗುತ್ತಿದೆ. ಯಾವುದೇ ಶುಭ ಕಾರ್ಯವನ್ನು ನಾವು ಪ್ರಾರ್ಥನೆಯಿಂದ ಆರಂಭಿಸುತ್ತೇವಲ್ಲ.  ಈ ಪ್ರಾರ್ಥನೆಯೊಂದಿಗೆ ಲೇಖಕ ಹೇಳುತ್ತಿರುವದು ಏನೆಂದರೆ  "ಇದರ ಜ್ಞಾನದಿಂದ ನನಗೆ ಬಹಳ ಪ್ರಯೋಜನವಾಗಿದೆ. ಅದಕ್ಕಾಗಿ ನಾ...