Posts

Showing posts from June, 2025

ವಾಕ್ಯ ವೃತ್ತಿ

    ಪರಿಚಯ:  ವಾಕ್ಯ ವೃತ್ತಿಯು ಒಂದು ವೇದಾಂತದ  ಸಣ್ಣ ಗ್ರಂಥವಾಗಿದ್ದು, ಎರಡು ಮಹಾವಾಕ್ಯಗಳಾದ  "ಅಹಂ ಬ್ರಹ್ಮಾಸ್ಮಿ "ಮತ್ತು "ತತ್ ತ್ವಮ್ ಅಸಿ "ಗಳ   ವಿಸ್ತಾರವಾದ  ವಿವರಣೆಯನ್ನು ಹೊಂದಿದೆ.    ಪ್ರತಿಯೊಂದು ಮಂತ್ರವನ್ನು ಗುರುವು ಶಿಷ್ಯನಿಗೆ ವಿವರಿಸುವಂತೆ ಸ್ಪಷ್ಟವಾಗಿ ವಿವರಿಸುವದನ್ನು ವೃತ್ತಿ ಎಂದು ಕರೆಯಲಾಗುತ್ತದೆ.   ಈ ಪಠ್ಯದ ಬಗ್ಗೆ ಬಹಳ ಪುರಾತನವಾದ ವ್ಯಾಖ್ಯಾನವು ಲಭ್ಯವಿದ್ದರೂ, ಇದರ ಲೇಖಕರ ಯಾರೆಂದು ನಿಖರವಾಗಿ ತಿಳಿದಿಲ್ಲ. ಈ ಕೃತಿಯ ಕುರಿತು ಸ್ವಾಮಿ ಚಿನ್ಮಯಾನಂದ ಅವರ ವ್ಯಾಖ್ಯಾನವನ್ನು 1981 ರಲ್ಲಿ ಪ್ರಕಟಿಸಲಾಯಿತು.  ವಾಕ್ಯ ವೃತ್ತಿಯು ಆದಿ ಶಂಕರರಿಂದ ರಚಿತವಾಗಿದೆ ಎಂದು ಹೇಳಲಾಗಿದೆ ಹಾಗೂ ಐವತ್ತೆರಡು ಶ್ಲೋಕಗಳನ್ನು ಹೊಂದಿದೆ.   ಇದು ಕುತೂಹಲಿಯಾದ ವಿದ್ಯಾರ್ಥಿಮತ್ತು ಜ್ಞಾನಿಯಾದ ಶಿಕ್ಷಕರ ನಡುವಿನ ಸಂಭಾಷಣೆಯ ರೂಪದಲ್ಲಿದೆ.  ಇದರಲ್ಲಿ ಒಬ್ಬ ವಿದ್ಯಾರ್ಥಿಯು ತನ್ನ ಗುರುಗಳ ಬಳಿ ಹೋಗಿ ಮಹಾವಾಕ್ಯವು(ತತ್ವಮಸಿ) ತನಗೆ ಸರಿಯಾಗಿ ತಿಳಿಯಲಿಲ್ಲ  ಎಂದು ಒಪ್ಪಿಕೊಳ್ಳುತ್ತಾನೆ ಮತ್ತು ಆಗ ಅವನ ಗುರುವು ತಾಳ್ಮೆಯಿಂದ ಈ ಮಹತ್ವದ ವಾಕ್ಯದಲ್ಲಿ ಬಳಸಲಾದ ಪದಗಳ ಮೂಲಕ ಅದರ ಅರ್ಥವನ್ನು ಸ್ಪಷ್ಟಪಡಿಸುತ್ತಾನೆ.  (ಆಧಾರ : ವಿಕಿಪೀಡಿಯಾ)

ಮನೀಷ ಪಂಚಕಂ

ಮನೀಷ ಪಂಚಕವನ್ನು ಬರೆದವರು ಜಗದ್ಗುರು ಆದಿ ಶಂಕರಾಚಾರ್ಯರು.  ಶ್ರೀ ಶಂಕರರು ತಮ್ಮ ಬ್ರಹ್ಮ ಸೂತ್ರದ ವ್ಯಾಖ್ಯಾನ (ಭಾಷ್ಯ)ದಲ್ಲಿ ವೇದಗಳ ಪಠಣವನ್ನು ಮೇಲ್ಜಾತಿಗಳಿಗೆ ಮಾತ್ರ ಸೀಮಿತಗೊಳಿಸಿದ್ದಾರೆ ಎಂದು ಜಾತೀವಾದವನ್ನು ಪ್ರತಿಪಾದಿಸಿದ್ದಕ್ಕಾಗಿ ಪಾಶ್ಚಿಮಾತ್ಯ ವಿದ್ವಾಂಸರು ಅವರನ್ನು ಟೀಕಿಸುತ್ತಾದರೆ. ಆದಾರೂ ಭಾಷ್ಯ ಬರೆಯುವವರು, ಒಂದು ಪಠ್ಯಕ್ಕೆ ವ್ಯಾಖ್ಯಾನ ಬರೆಯುವಾಗ ಅದರ ಮೂಲ ಅರ್ಥಕ್ಕೆ ಸೀಮಿತರಾಗಿರಬೇಕಾಗುತ್ತದೆ ಎಂಬುದನ್ನು ಗಮನಿಸಬೇಕು.  ಉಪದೇಶಸಹಸ್ರಿ ಮತ್ತು ಸಣ್ಣ ಕೃತಿಯಾದ ಈ ಮನೀಶ ಪಂಚಕದಂತಹ ಸ್ವತಂತ್ರ ರಚನೆಗಳಲ್ಲಿ ಅವರು ತಮ್ಮ ಅದ್ವೈತ ಸಿದ್ಧಾಂತವನ್ನು ಸಕಲ ವೈಭವದೊಂದಿಗೆ ವಿವರಿಸುತ್ತಾರೆ. ಅದ್ವೈತ ಸಿದ್ಧಾಂತವು ಜಾತಿ, ಮತ, ಧರ್ಮ, ಲಿಂಗಗಳ  ವ್ಯತ್ಯಾಸಗಳನ್ನು ಗುರುತಿಸುವುದಿಲ್ಲ - ಏಕೆಂದರೆ ನಾವೆಲ್ಲರೂ ಒಬ್ಬನೇ ಬ್ರಹ್ಮನ ಬೇರೆ ಬೇರೆ ರೂಪಗಳು. ಈ ಕೃತಿಯ ಸನ್ನಿವೇಶವು ಭಾರತದ ಪವಿತ್ರ ಕ್ಷೇತ್ರವಾದ ವಾರಣಾಸಿಯಲ್ಲಿ  ನಡೆದಿದೆ. ಅದ್ವೈತ ಶಾಸ್ತ್ರದ ಪ್ರತಿಪಾದಕರಾದ ಆದಿ ಶಂಕರಾಚಾರ್ಯರು ಸ್ನಾನ ಮುಗಿಸಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಇದ್ದಕ್ಕಿದ್ದಂತೆ ದಾರಿಯಲ್ಲಿ ಒಬ್ಬ ಚಂಡಾಲನನ್ನು ನೋಡಿ, ಆ ದಿನಗಳಲ್ಲಿನ  ಪದ್ಧತಿಯ ಪ್ರಕಾರ ದೂರವನ್ನು ಕಾಯ್ದುಕೊಳ್ಳಲು ಸನ್ನೆ ಮಾಡಿದರು. ಆ ಚಂಡಾಲ ಭಗವಾನ್ ಶಂಕರ(ಶಿವ)ನೇ ಹೊರತು ಬೇರಾರೂ ಅಲ್ಲ! ಹಾಗೆ ಸನ್ನೆ ಮಾಡಿದಾಗ, ಶಿವನು ತನ್ನ ಭಕ್ತ ಶಂಕಾರಾಚ...