ಈಶೋಪನಿಷತ್
ಉಪನಿಷತ್ತಗಳು
ಉಪನಿಷತ್ತುಗಳು ವೇದಗಳ ಅಂತ್ಯ ಭಾಗದ ರಚನೆಗಳು. ಇವುಗಳು ವೇದಗಳ ರಚನೆಯ ನಂತರದ ರಚನೆಯಾಗಿದ್ದು ಬಹಳ ಪ್ರಸಿದ್ಧವಾಗಿವೆ.
ಉಪನಿಷತ್ತುಗಳನ್ನಯ ವೇದಾಂತ ಎಂದೂ ಕರೆಯುತ್ತಾರೆ. ಆತ್ಮಜ್ಞಾನ, ಧ್ಯಾನ ಇತ್ಯಾದಿ ಆಧ್ಯಾತ್ಮವನ್ನು ವಿವರಿಸುವ ಇವು ಪೂಜೆ, ಆಚರಣೆ, ಯಜ್ಞ ಇತ್ಯಾದಿಗಳನ್ನು ವಿವರಿಸುವ ವೇದಗಳಿಗಿಂತ ವಿಭಿನ್ನವಾಗಿವೆ.
ಒಟ್ಟು 200ಕ್ಕೂ ಹೆಚ್ಚು ಉಪನಿಷತ್ತುಗಳಿದ್ದರೂ ಅವುಗಳಲ್ಲಿ ಪ್ರಮುಖವೆಂದರೆ - ಈಶ, ಕೇನ, ಕಠ, ಪ್ರಶ್ನ, ಮುಂಡಕ, ಮಾಂಡೂಕ, ತೈತ್ತರೀಯ, ಐತ್ತರೀಯ, ಚಾಂಡೋಗ್ಯ, ಬ್ರಹದಾರಣ್ಯಕ
ಮ್ಯಾಕ್ಸ್ ಮುಲ್ಲರ್ ಅವರು ಅನುವಾದಿಸಿದ ಹಲವು ಉಪನಿಷತ್ತುಗಳ ಆಂಗ್ಲ ಅನುವಾದ ಹಿಂದೂವೆಬ್ಸೈಟ್ ನಲ್ಲಿ ಲಬ್ಧವಿದೆ
ಈಶ ಉಪನಿಷತ್
ಈಶೋಪನಿಷತ್ ಶುಕ್ಲ ಯಜುರ್ವೇದದ ಭಾಗವಾಗಿದೆ. ಕೇವಲ ೧೮ ಶ್ಲೋಕಗಳನ್ನು ಹೊಂದಿರುವ ಈ ಉಪನಿಷದ್ ಸಂಕೀರ್ಣವಾದರೂ ಅರ್ಥಗರ್ಭಿತವಾಗಿದೆ.
ಇದರ ಮೊದಲ ಶ್ಲೋಕ 'ಈಶಾವಾಸ್ಯಮಿದಂ ..' ಎಂದು ಆರಂಭವಾಗುವದರಿಂದ ಇದಕ್ಕೆ ಈಶಾವಾಸ್ಯ ಉಪನಿಷತ್ ಎಂದೂ ಹೇಳುತ್ತಾರೆ.
ಮಹಾತ್ಮಾ ಗಾಂಧಿಯವರು ಹೇಳಿದ್ದರಂತೆ
" ಈ ಉಪನಿಷತ್ತಿನ ಮೊದಲನೇ ಶ್ಲೋಕವೊಂದೇ ವೇದಗಳ ಸಂಪೂರ್ಣ ತಾತ್ಪರ್ಯವನ್ನು ಒಂದೇ ಒಂದು ಶ್ಲೋಕದಲ್ಲಿ ಹೇಳುತ್ತದೆ"
ಶಾಂತಿ ಮಂತ್ರ
ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ .
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ..
ಓಂ ಶಾಂತಿಃ ಶಾಂತಿಃ ಶಾಂತಿಃ ..
ಓಂ , ಅದು (ಬಾಹ್ಯ ಜಗತ್ತು , ಕಣ್ಣಿಗೆ ಕಾಣುವ ಜಗತ್ತು) ಪರಿಪೂರ್ಣ. ಇದು ಪರಿಪೂರ್ಣ ( ಕಣ್ಣಿಗೆ ಕಾಣದ ಜಗತ್ತು). ಪೂರ್ಣದಿಂದ ಪೂರ್ಣ ಉತ್ಪತ್ತಿಯಾಗುತ್ತದೆ. ಪೂರ್ಣದಿಂದ ಪೂರ್ಣವನ್ನು ಕಳೆದರು ಪೂರ್ಣವೇ ಉಳಿಯುತ್ತದೆ.
ಸಚ್ಚಿದಾನಂದ ಪರಬ್ರಹ್ಮನು ಪರಿಪೂರ್ಣ. ಅವನಿಂದ ರಚಿತವಾದ ಈ ಜಗತ್ತು ಪೂರ್ಣ. ಈ ಪೂರ್ಣ ಜಗತ್ತಿನಿಂದ ಎಲ್ಲವನ್ನು ಹೊರ ತೆಗೆದರೂ ಪೂರ್ಣವೇ ಉಳಿಯುತ್ತದೆ.
ನೀವು ಸಂಪೂರ್ಣವಾದ ಒಂದು ದೀಪದಿಂದ ಇನ್ನೊಂದು ದೀಪವನ್ನು ಬೆಳಗಿದರೆ,ಮೊದಲಿನ ದೀಪದ ಬೆಳಕೂ ಸಹ ಪೂರ್ಣವಾಗಿಯೇ ಇರುವದಲ್ಲ.
ಇನ್ನೊಂದು ಉದಾಹರಣೆ ಜ್ಞಾನ - ನಿಮ್ಮ ಸಂಪೂರ್ಣ ಜ್ಞಾನವನ್ನು ಇನ್ನೊಬ್ಬರಿಗೆ ಹೇಳಿಕೊಟ್ಟರೆ, ನಿಮ್ಮ ಜ್ಞಾನ ಸಂಪೂರ್ಣವಾಗಿಯೂ ಉಳಿಯುತ್ತದೆ ತಾನೇ?
ಓಂ ಈಶಾ ವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್ .
ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್ಧನಂ .. 1..
ಈ ಬಾಹ್ಯ ಜಗತ್ತನ್ನು ತ್ಯಜಿಸು. ಅಭಿಮಾನ, ಅಹಂಕಾರ, ಸ್ವಾರ್ಥ, ದೇಹದ ಮೋಹ ಎಲ್ಲವನ್ನು ತ್ಯಜಿಸು. ಆಗ ನೀನು 'ಅವನೇ' ಆಗುತ್ತೀಯ .
ಕುರ್ವನ್ನೇವೇಹ ಕರ್ಮಾಣಿ ಜಿಜೀವಿಷೇಚ್ಛತಂ ಸಮಾಃ .
ಏವಂ ತ್ವಯಿ ನಾನ್ಯಥೇತೋಽಸ್ತಿ ನ ಕರ್ಮ ಲಿಪ್ಯತೇ ನರೇ .. 2..
ಅಸುರ್ಯಾ ನಾಮ ತೇ ಲೋಕಾ ಅಂಧೇನ ತಮಸಾಽಽವೃತಾಃ .
ತಾಂಸ್ತೇ ಪ್ರೇತ್ಯಾಭಿಗಚ್ಛಂತಿ ಯೇ ಕೇ ಚಾತ್ಮಹನೋ ಜನಾಃ .. 3..
ಅಜ್ಞಾನದಿಂದ ಆತ್ಮನನ್ನು ಹನನ ಮಾಡುವವರು ಅಸುರ್ಯ (ಅಸುರರ ಲೋಕ, ದುಃಖ ದಾರಿದ್ರ್ಯ ತುಂಬಿದ ಲೋಕ) ಎಂಬ ಕತ್ತಲೆಯಿಂದ ತುಂಬಿದ ಲೋಕಕ್ಕೆ ಹೋಗುತ್ತಾರೆ.
ಅನೇಜದೇಕಂ ಮನಸೋ ಜವೀಯೋ ನೈನದ್ದೇವಾ ಆಪ್ನುವನ್ಪೂರ್ವಮರ್ಷತ್ .
ತದ್ಧಾವತೋಽನ್ಯಾನತ್ಯೇತಿ ತಿಷ್ಠತ್ತಸ್ಮಿನ್ನಪೋ ಮಾತರಿಶ್ವಾ ದಧಾತಿ .. 4..
ತದೇಜತಿ ತನ್ನೈಜತಿ ತದ್ದೂರೇ ತದ್ವಂತಿಕೇ .
ತದಂತರಸ್ಯ ಸರ್ವಸ್ಯ ತದು ಸರ್ವಸ್ಯಾಸ್ಯ ಬಾಹ್ಯತಃ .. 5..
ಅದು (ಆತ್ಮವು) ಚಲಿಸುತ್ತದೆ. ಅದು ಚಲಿಸುವದಿಲ್ಲ. ಅದು ದೂರದಲ್ಲಿದೆ. ಅದು ಹತ್ತಿರದಲ್ಲಿದೆ. ಅದು ಸರ್ವರ ಒಳಗಿದೆ. ಅದು ಸರ್ವರ ಬಾಹ್ಯದಲ್ಲಿದೆ.
ಯಸ್ತು ಸರ್ವಾಣಿ ಭೂತಾನ್ಯಾತ್ಮನ್ಯೇವಾನುಪಶ್ಯತಿ .
ಸರ್ವಭೂತೇಷು ಚಾತ್ಮಾನಂ ತತೋ ನ ವಿಜುಗುಪ್ಸತೇ .. 6..
ಯಸ್ಮಿನ್ಸರ್ವಾಣಿ ಭೂತಾನ್ಯಾತ್ಮೈವಾಭೂದ್ವಿಜಾನತಃ .
ತತ್ರ ಕೋ ಮೋಹಃ ಕಃ ಶೋಕ ಏಕತ್ವಮನುಪಶ್ಯತಃ .. 7..
ಸ ಪರ್ಯಗಾಚ್ಛುಕ್ರಮಕಾಯಮವ್ರಣ-
ಮಸ್ನಾವಿರಂ ಶುದ್ಧಮಪಾಪವಿದ್ಧಂ .
ಕವಿರ್ಮನೀಷೀ ಪರಿಭೂಃ ಸ್ವಯಂಭೂ-
ರ್ಯಾಥಾತಥ್ಯತೋಽರ್ಥಾನ್ ವ್ಯದಧಾಚ್ಛಾಶ್ವತೀಭ್ಯಃ ಸಮಾಭ್ಯಃ .. 8..
ಅಂಧಂ ತಮಃ ಪ್ರವಿಶಂತಿ ಯೇಽವಿದ್ಯಾಮುಪಾಸತೇ .
ತತೋ ಭೂಯ ಇವ ತೇ ತಮೋ ಯ ಉ ವಿದ್ಯಾಯಾಂ ರತಾಃ .. 9..
ಯಾರು ಅವಿದ್ಯೆಯನ್ನು, ಆಜ್ಞಾನವನ್ನು ಉಪಾಸನೆ ಮಾಡುತ್ತಾರೋ (ಕರ್ಮವೊಂದನ್ನೆ ಮಾಡುತ್ತಾರೋ) ಅವರ ಕುರುಡಾಗಿಸುವ ಕಾರ್ಗತ್ತಲೆಯನ್ನು ಪ್ರವೇಶಿಸುತ್ತಾರೆ.
ಅನ್ಯದೇವಾಹುರ್ವಿದ್ಯಯಾಽನ್ಯದಾಹುರವಿದ್ಯಯಾ .
ಇತಿ ಶುಶ್ರುಮ ಧೀರಾಣಾಂ ಯೇ ನಸ್ತದ್ವಿಚಚಕ್ಷಿರೇ .. 10..
ವಿದ್ಯಾಂ ಚಾವಿದ್ಯಾಂ ಚ ಯಸ್ತದ್ವೇದೋಭಯಂ ಸಹ .
ಅವಿದ್ಯಯಾ ಮೃತ್ಯುಂ ತೀರ್ತ್ವಾ ವಿದ್ಯಯಾಽಮೃತಮಶ್ನುತೇ .. 11..
ಯಾರು ವಿದ್ಯೆ ಮತ್ತು ಅವಿದ್ಯೆಗಳನ್ನೆರಡನ್ನು ತಿಳಿದಿರುತ್ತಾನೋ, ಅವನಿಗೆ ಅವಿದ್ಯೆಯ ಜ್ಞಾನದಿಂದ ಮೃತ್ಯುವನ್ನೇನೋ ಗೆಲ್ಲಬಹುದು. ಆದರೆ ವಿದ್ಯೆಯ ಅರಿವಿನಿಂದ ಅವನು ಮುಕ್ತಿಯನ್ನು ಪಡೆಯುತ್ತಾನೆ.
ಅಂಧಂ ತಮಃ ಪ್ರವಿಶಂತಿ ಯೇಽಸಂಭೂತಿಮುಪಾಸತೇ .
ತತೋ ಭೂಯ ಇವ ತೇ ತಮೋ ಯ ಉ ಸಂಭೂತ್ಯಾಂ ರತಾಃ .. 12..
ಅನ್ಯದೇವಾಹುಃ ಸಂಭವಾದನ್ಯದಾಹುರಸಂಭವಾತ್ .
ಇತಿ ಶುಶ್ರುಮ ಧೀರಾಣಾಂ ಯೇ ನಸ್ತದ್ವಿಚಚಕ್ಷಿರೇ .. 13..
ಸಗುಣ ದೇವರನ್ನು ಪೂಜಿಸುವದರಿಂದ ಬೇರೆ ಫಲ ದೊರೆಯುತ್ತದೆ. ನಿರ್ಗುಣವನ್ನು ಪೂಜಿಸುವದರಿಂದ ಬೇರೆ ಫಲ ದೊರೆಯುತ್ತದೆ. ಹೀಗೆಂದು ನಮಗೆ ಜ್ಞಾನಿಗಳಿಂದ ನಾವು ಕೇಳಿದ್ದೇವೆ.
ಸಂಭೂತಿಂ ಚ ವಿನಾಶಂ ಚ ಯಸ್ತದ್ವೇದೋಭಯಂ ಸಹ .
ವಿನಾಶೇನ ಮೃತ್ಯುಂ ತೀರ್ತ್ವಾ ಸಂಭೂತ್ಯಾಽಮೃತಮಶ್ನುತೇ .. 14..
ಸಂಭೂತಿ (ಪೃಕೃತಿ) ಮತ್ತು ವಿನಾಶ ಎರಡನ್ನೂ ಯಾರು ಅರಿಯುತ್ತಾನೋ, ಅವನು ವಿನಾಶದ ಅರಿವಿನಿಂದ ಸಾವನ್ನು ಗೆಲ್ಲುತ್ತಾನೆ. ಸಂಭೂತಿಯ ಅರಿವಿನಿಂದ ಅಮೃತವನ್ನು ಹೊಂದುತ್ತಾನೆ.
15ರಿಂದ 18ರವರೆಗಿನ ಶ್ಲೋಕಗಳು ಪ್ರಾರ್ಥನೆಯ ಶ್ಲೋಕಗಳು. ಇವು ಬೇರೆ ಶ್ಲೋಕಗಳಿಗೆ ಅಷ್ಟು ಸಂಬಂಧಿಸಿಲ್ಲ. ಅವು ಆತ್ಮದ ವಿವರಣೆಯನ್ನು ಕೊಡುವ ಶ್ಲೋಕಗಳಲ್ಲ.
ಹಿರಣ್ಮಯೇನ ಪಾತ್ರೇಣ ಸತ್ಯಸ್ಯಾಪಿಹಿತಂ ಮುಖಂ .
ತತ್ತ್ವಂ ಪೂಷನ್ನಪಾವೃಣು ಸತ್ಯಧರ್ಮಾಯ ದೃಷ್ಟಯೇ .. 15..
ಪೂಷನ್ನೇಕರ್ಷೇ ಯಮ ಸೂರ್ಯ ಪ್ರಾಜಾಪತ್ಯ
ವ್ಯೂಹ ರಶ್ಮೀನ್ ಸಮೂಹ ತೇಜಃ .
ಯತ್ತೇ ರೂಪಂ ಕಲ್ಯಾಣತಮಂ ತತ್ತೇ ಪಶ್ಯಾಮಿ
ಯೋಽಸಾವಸೌ ಪುರುಷಃ ಸೋಽಹಮಸ್ಮಿ .. 16..
ವಾಯುರನಿಲಮಮೃತಮಥೇದಂ ಭಸ್ಮಾಂತಂ ಶರೀರಂ .
ಓಂ ಕ್ರತೋ ಸ್ಮರ ಕೃತಂ ಸ್ಮರ ಕ್ರತೋ ಸ್ಮರ ಕೃತಂ ಸ್ಮರ .. 17..
ನನ್ನ ಪ್ರಾಣವು ಸರ್ವವ್ಯಾಪಿಯಾದ ವಾಯುವಿನಲ್ಲಿ ಸೇರಲಿ, ಶರೀರವು ಭಸ್ಮವಾಗಲಿ. ಓಂ ಮನಸೇ, ನಿನ್ನ ಕರ್ಮಗಳನ್ನು ನೆನಪಿಸಿಕೋ.
ಅಗ್ನೇ ನಯ ಸುಪಥಾ ರಾಯೇ ಅಸ್ಮಾನ್
ವಿಶ್ವಾನಿ ದೇವ ವಯುನಾನಿ ವಿದ್ವಾನ್ .
ಯುಯೋಧ್ಯಸ್ಮಜ್ಜುಹುರಾಣಮೇನೋ
ಭೂಯಿಷ್ಠಾಂ ತೇ ನಮೌಕ್ತಿಂ ವಿಧೇಮ .. 18..
ಹೇ ಅಗ್ನಿಯೇ, ನಮ್ಮ ಎಲ್ಲ ಕರ್ಮಗಳನ್ನು ಅರಿತವನಾದ ನೀನು, ನಮ್ಮ ಕರ್ಮಫಲ ಆನಂದಿಸುಲು ನಮ್ಮನ್ನು ಸರಿಯಾದ ಮಾರ್ಗದಲ್ಲಿ ನಡೆಸಿಕೊಂಡು ಹೋಗು. ನಮ್ಮಲ್ಲಿರುವ ಕುಟಿಲ ಬುದ್ಧಿಯನ್ನು ದೂರ ಮಾಡು. ನಾವು ನಮೃತೆಯಿಂದ ನಿನ್ನನ್ನು ಪ್ರಾರ್ಥಿಸುತ್ತೇವೆ.
Comments
Post a Comment