ಭಜ ಗೋವಿಂದಂ
ಭಜ ಗೋವಿಂದಂ ಭಜ ಗೋವಿಂದಂ ಭಜ - ಭಜಿಸು ಗೋವಿಂದಂ - ಗೋವಿಂದಂ ಮೂಢಮತೆ - ಮೂಢಬುದ್ಧಿಯವನೇ ಗೋವಿಂದಂ ಭಜ ಮೂಢಮತೇ . ಸಂಪ್ರಾಪ್ತೇ ಸನ್ನಿಹಿತೇ ಕಾಲೇ ನಹಿ ನಹಿ ರಕ್ಷತಿ ಡುಕೃಂಕರಣೇ .. 1.. ಸಂಪ್ರಾಪ್ತೇ - ಪ್ರಾಪ್ತವಾದಾಗ ಸನ್ನಿಹತೇ - ಹತ್ತಿರ ಬಂದಾಗ ನಹಿ ರಕ್ಷತಿ - ರಕ್ಷಿಸುವದಿಲ್ಲ ಡುಕೃಂಕರಣೆ - ವ್ಯಾಕರಣ ಜ್ಞಾನ | ಮೂಢಮತಿಯೇ, ಗೋವಿಂದನನ್ನು ಭಜಿಸು, ಗೋವಿಂದನನ್ನು ಭಜಿಸು. ಮರಣ ಕಾಲ ಬಂದಾಗ ನಿನ್ನ ವ್ಯಾಕರಣ ಜ್ಞಾನ (ಪುಸ್ತಕ ಜ್ಞಾನ) ನಿನ್ನನ್ನು ರಕ್ಷಿಸುವದಿಲ್ಲ. |
| ಮೂಢ ಜಹೀಹಿ ಧನಾಗಮತೃಷ್ಣಾಂ ಕುರು ಸದ್ಬುದ್ಧಿಂ ಮನಸಿ ವಿತೃಷ್ಣಾಂ . ಯಲ್ಲಭಸೇ ನಿಜಕರ್ಮೋಪಾತ್ತಂ ವಿತ್ತಂ ತೇನ ವಿನೋದಯ ಚಿತ್ತಂ .. 2.. ಜಹೀಹಿ - ತ್ಯಜಿಸು ಧನ ಆಗಮ - ದುಡ್ಡು ಬರಬೇಕು ತೃಷ್ಣಾ - ಆಸೆ ಕುರು - ಮಾಡು ಸತ್ ಬುದ್ಧಿಂ - ಒಳ್ಳೆಯ ಬುದ್ಧಿಯನ್ನು ವಿತೃಷ್ಣಾಂ - ಆಸೆ ಇಲ್ಲದೆ ಯತ್ ಲಭಸೇ - ಯಾವುದು ಸಿಗುವದೋ ನಿಜ ಕರ್ಮ ಉಪಾತ್ತಂ - ನಿಜ ಕರ್ಮದಿಂದ ಲಬ್ಧವಾಗಿರುವದನ್ನು ವಿತ್ತಂ - ಧನ ತೇನ - ಅದರಿಂದ ವಿನೋದಯ - ಸಂತೋಷ ಪಡು | ಮೂರ್ಖನೇ, ಧನದಾಸೆಯನ್ನು ತ್ಯಜಿಸು. ಆಸೆಯನ್ನು ಬಿಟ್ಟು ಒಳ್ಳೆ ಬುದ್ದಿಯನ್ನು ಮಾಡು. ನಿನ್ನ ಕರ್ಮದಿಂದ ಏನು ದೊರಕುವದೋ ಅದನ್ನು ಸ್ವೀಕರಿಸಿ ಸಮಾಧಾನದಿಂದಿರು. |
ನಾರೀಸ್ತನಭರನಾಭೀದೇಶಂ ನಾರಿ - ಹೆಣ್ಣು ನಾಭಿದೇಶಂ - ನಾಭಿ ಪ್ರದೇಶ ದೃಷ್ಟ್ವಾ - ನೋಡಿ ಮಾ ಗಾ - ಹೋಗಬೇಡ ಏತತ್ ಮಾಂಸ ವಸಾದಿ - ಇದು ಮಾಂಸ ಕೊಬ್ಬು ವಿಕಾರಂ - ಕುರೂಪ ಮನಸಿ - ಮನಸ್ಸಿನಲ್ಲಿ ವಿಚಿಂತಯ - ಚೆನ್ನಾಗಿ ಯೋಚಿಸು ವಾರಂ ವಾರಂ - ಪುನಃ ಪುನಃ | ಹೆಣ್ಣಿನ ಸ್ತನ, ನಾಭಿಗಳನ್ನು ನೋಡಿ ಮೋಹಾವೇಶಗೊಳ್ಳಬೇಡ. ಇವು ಮಾಂಸ-ಕೊಬ್ಬುಗಳ ವಿಕಾರಗಳು ಮಾತ್ರ. ಈ ಮಾತನ್ನು ಪುನಃ ಪುನಃ ಯೋಚಿಸುತ್ತಿರು. |
ನಲಿನೀ ದಲಗತ ಜಲಮತಿ ತರಲಂ ನಲಿನಿ ದಲ ಗತ - ಕಮಲದ ಎಲೆಯ ಮೇಲಿರುವ ಜಲಂ - ನೀರು ಅತಿ ತರಲಂ - ಬಹಳ ಚಂಚಲ ತದ್ವತ್ - ಹಾಗೆಯೇ ಜೀವಿತಂ - ಜೀವನವು ಅತಿಶಯ ಚಪಲಂ - ಬಹು ಚಂಚಲ ವಿದ್ಧಿ - ತಿಳಿದುಕೋ ವ್ಯಾಧಿ - ರೋಗ ಗ್ರಸ್ತಂ - ಪೀಡಿತವಾದ ಶೋಕಹತಂ - ದುಃಖದಿಂದ ಸೋಲಿಸಲ್ಪಟ್ಟಿದೆ ಸಮಸ್ತಂ - ಎಲ್ಲಾ | ಕಮಲದ ಎಲೆಯ ಮೇಲಿನ ನೀರಿನಂತೆ ಜೀವನವು ಅತಿ ಅನಿಶ್ಚಿತ. ಈ ಲೋಕವೆಲ್ಲ ವ್ಯಾಧಿ, ಶೋಕಗಳಿಂದ ತುಂಬಿದೆ ಎನ್ನುವದನ್ನು ತಿಳಿದುಕೋ. |
ಯಾವದ್ವಿತ್ತೋಪಾರ್ಜನಸಕ್ತ- ಸ್ತಾವನ್ನಿಜಪರಿವಾರೋ ರಕ್ತಃ . ಪಶ್ಚಾಜ್ಜೀವತಿ ಜರ್ಜರದೇಹೇ ವಾರ್ತಾಂ ಕೋಽಪಿ ನ ಪೃಚ್ಛತಿ ಗೇಹೇ .. 5.. ಯಾವತ್ - ಎಲ್ಲಿಯ ತನಕ ವಿತ್ತ ಉಪಾರ್ಜನ ಸಕ್ತ - ಧನವನ್ನು ಗಳಿಸಲು ಶಕ್ಯನೋ ತಾವತ್ - ಅಲ್ಲಿಯ ತನಕ ನಿಜ ಪರಿವಾರ - ಪರಿವಾರವು ರಕ್ತ: - ಜೊತೆಯಲ್ಲಿರುತ್ತದೆ ಪಶ್ಷಾತ್ - ನಂತರ ಕ: ಅಪಿ - ಯಾರೂ ಸಹ ನ ಪೃಚ್ಛತಿ - ಕೇಳುವದಿಲ್ಲ ಗೇಹೆ - ಮನೆಯಲ್ಲಿ | ದುಡ್ಡನ್ನು ಸಂಪಾದಿಸಲು ಶಕ್ತಿ ಇದ್ದಾಗ, ಮನುಷ್ಯನಿಗೆ ಬಂಧು ಬಳಗ ಇರುತ್ತಾರೆ. ನಂತರ ದೇಹ ಜರ್ಜರವಾದಾಗ ಮನೆಯಲ್ಲೂ ಯಾರೂ ಅವನನ್ನು ಮಾತಾಡಿಸುವರಿರುವದಿಲ್ಲ. |
ಯಾವತ್ಪವನೋ ನಿವಸತಿ ದೇಹೇ ತಾವತ್ಪೃಚ್ಛತಿ ಕುಶಲಂ ಗೇಹೇ . ಗತವತಿ ವಾಯೌ ದೇಹಾಪಾಯೇ ಭಾರ್ಯಾ ಬಿಭ್ಯತಿ ತಸ್ಮಿನ್ಕಾಯೇ .. 6.. ಯಾವತ್ ಪವನೋ ನಿವಸತಿ - ಎಲ್ಲಿಯ ತನಕ ಗಾಳಿ (ಉಸಿರು) ಇರುತ್ತದೆಯೋ ದೇಹೆ - ದೇಹದಲ್ಲಿ ತಾವತ್ ಪ್ರಚ್ಛತಿ ಕುಶಲಂ - ಅಲ್ಲಿಯ ತನಕ ಕೌಶಲ್ಯವನ್ನು ವಿಚಾರಿಸುತ್ತಾರೆ ಗೇಹೆ - ಮನೆಯಲ್ಲಿ ಗತವತಿ ವಾಯೌ - ಉಸಿರು ಹೋದಾಗ ಭಾರ್ಯಾ - ಹೆಂಡತಿ ಬಿಭ್ಯತಿ - ಭಯ ಪಡುತ್ತಾಳೆ ತಸ್ಮಿನ್ ಕಾಯೇ - ಆ ಶರೀರದಿಂದ | ದೇಹದಲ್ಲಿ ಉಸಿರಿರುವತನಕ ಎಲ್ಲರು ಕ್ಷೇಮಸಮಾಚಾರ ಕೇಳುತ್ತಾರೆ. ದೇಹದಿಂದ ಉಸಿರು ಹೊರಟು ಹೋದ ನಂತರ ಹೆಂಡತಿಯು ಸಹ ಆ ದೇಹವನ್ನು ನೋಡಿ ಭಯಪಡುತ್ತಾಳೆ. |
| ಬಾಲಸ್ತಾವತ್ಕ್ರೀಡಾಸಕ್ತಃ ತರುಣಸ್ತಾವತ್ತರುಣೀಸಕ್ತಃ . ವೃದ್ಧಸ್ತಾವಚ್ಚಿಂತಾಸಕ್ತಃ ಪರಮೇ ಬ್ರಹ್ಮಣಿ ಕೋಽಪಿ ನ ಸಕ್ತಃ .. 7.. ಬಾಲಃ - ಬಾಲಕನು ತಾವತ್ - ಅಲ್ಲಿಯ ತನಕ ಕ್ರೀಡಾ ಸಕ್ತಃ - ಆಟದಲ್ಲಿ ಆಸಕ್ತನು ತರುಣ: ತಾವತ್ ತರುಣೀ ಸಕ್ತಃ - ತರುಣನು ತರುಣಿಯಲ್ಲಿ ಆಸಕ್ತನು ವೃದ್ಧ: ತಾವತ್ ಚಿಂತಾ ಸಕ್ತಃ - ವೃದ್ಧನು ಚಿಂತೆಯಲ್ಲಿ ಆಸಕ್ತನು ಪರಮೇ - ಪರಮಾತ್ಮ ಬ್ರಹ್ಮಣಿ - ಬ್ರಹ್ಮನಲ್ಲಿ ಕಃ ಅಪಿ - ಯಾರೂ ಕೂಡ ನ ಸಕ್ತಃ - ಆಸಕ್ತರಲ್ಲ | ಬಾಲಕರಿಗೆ ಆಟ-ಓಟಗಳಲ್ಲಿ ಆಸಕ್ತಿಯಿರುತ್ತದೆ. ತರುಣರಿಗೆ ತರುಣಿಯರಲ್ಲಿ ಆಸಕ್ತಿಯಿರುತ್ತದೆ. ವೃದ್ಧರು ಚಿಂತೆಮಾಡುವದರಲ್ಲಿ ಮಗ್ನರಾಗಿರುತ್ತಾರೆ. ಪರಬ್ರಹ್ಮನಲ್ಲಿ ಯಾರಿಗೂ ಆಸಕ್ತಿಯಿರುವದಿಲ್ಲ. |
ಕಾ ತೇ ಕಾಂತಾ ಕಸ್ತೇ ಪುತ್ರಃ ಕಾ - ಯಾರು ತೇ - ನಿನ್ನ ಕಾಂತಾ - ಪತ್ನಿ ಕಃ - ಯಾರು ತೇ - ನಿನ್ನ ಸಂಸಾರಃ ಅಯಂ - ಈ ಸಂಸಾರ ಅತೀವ ವಿಚಿತ್ರ - ಬಹಳ ವಿಚಿತ್ರ ಕಸ್ಯ - ಯಾರ ತ್ವಂ - ನೀನು ಕುತ - ಎಲ್ಲಿಂದ ಆಯಾತ - ಬಂದೆ ತತ್ವಂ - ನೈಜ ತತ್ವವನ್ನು ಚಿಂತಯ - ಚಿಂತಿಸು ತತ್ ಇಹ - ಇಲ್ಲಿ ಭ್ರಾತಃ - ಸಹೋದರ | ನಿನ್ನ ಹೆಂಡತಿ ಯಾರು? ನಿನ್ನ ಮಗ ಯಾರು? ಈ ಸಂಸಾರ ಅತೀವ ವಿಚಿತ್ರವಾಗಿದೆ. ನೀನು ಯಾರವನು? ನೀನು ಯಾರು? ಎಲ್ಲಿಂದ ಬಂದಿರುವೆ? ಈ ನಿಜವನ್ನು ಯೋಚನೆ ಮಾಡು, ಸಹೋದರ. |
ಸತ್ಸಂಗತ್ವೇ ನಿಸ್ಸಂಗತ್ವಂ | ಸಜ್ಜನರ ಸಂಗದಿಂದ ನಿಸ್ಸಂಗತ್ವ - ನಿರಾಸಕ್ತಿ ಪ್ರಾಪ್ತಿಯಾಗುತ್ತದೆ. ನಿಸ್ಸಂಗತ್ವದಿಂದ ನಿರ್ಮೋಹ ಸಿಗುತ್ತದೆ. ನಿರ್ಮೋಹದಿಂದ ನೈಜ ಸತ್ಯ ದೊರೆಯುತ್ತದೆ. ನೈಜ ಸತ್ಯದಿಂದ ಜೀವನ ಮುಕ್ತಿ ಸಿಗುತ್ತದೆ. |
| ವಯಸಿ ಗತೇ ಕಃ ಕಾಮವಿಕಾರಃ ಶುಷ್ಕೇ ನೀರೇ ಕಃ ಕಾಸಾರಃ . ಕ್ಷೀಣೇ ವಿತ್ತೇ ಕಃ ಪರಿವಾರಃ ಜ್ಞಾತೇ ತತ್ತ್ವೇ ಕಃ ಸಂಸಾರಃ .. 10.. | ವಯಸ್ಸು ಹೋದ ಮೇಲೆ ಕಾಮವಿಕಾರವೆಲ್ಲಿ? ನೀರು ಆರಿದ ಮೇಲೆ ಕೆರೆ ಎಲ್ಲಿ? ದುಡ್ಡೆಲ್ಲ ಕರಗಿದ ಮೇಲೆ ಪರಿವಾರವೆಲ್ಲಿ? ತತ್ವವನ್ನು ತಿಳಿದಮೇಲೆ ಸಂಸಾರವೆಲ್ಲಿ? |
| ಮಾ ಕುರು ಧನಜನಯೌವನಗರ್ವಂ ಹರತಿ ನಿಮೇಷಾತ್ಕಾಲಃ ಸರ್ವಂ . ಮಾಯಾಮಯಮಿದಮಖಿಲಂ ಹಿತ್ವಾ ಬ್ರಹ್ಮಪದಂ ತ್ವಂ ಪ್ರವಿಶ ವಿದಿತ್ವಾ .. 11.. | ಧನ, ಜನ, ಯೌವನದ ಗರ್ವ ಮಾಡಬೇಡ. ಇದೆಲ್ಲವೂ ಒಂದು ಕ್ಷಣದಲ್ಲೇ ಮಾಯವಾಗಬಹುದು. ಇದೆಲ್ಲವೂ ಮಾಯಾಮಯವಾದ ಇವೆಲ್ಲವನ್ನೂ ತ್ಯಜಿಸಿ ನೀನು ಬ್ರಹ್ಮಪದವನ್ನು ಪ್ರವೇಶಿಸು. |
| ದಿನಯಾಮಿನ್ಯೌ ಸಾಯಂ ಪ್ರಾತಃ ಶಿಶಿರವಸಂತೌ ಪುನರಾಯಾತಃ . ಕಾಲಃ ಕ್ರೀಡತಿ ಗಚ್ಛತ್ಯಾಯು- ಸ್ತದಪಿ ನ ಮುಂಚತ್ಯಾಶಾವಾಯುಃ .. 12 | ದಿನ, ರಾತ್ರಿಗಳು, ಬೆಳಗು ಸಂಜೆಗಳು, ಶಿಶಿರ, ವಸಂತಗಳು ಮತ್ತೆ ಮತ್ತೆ ಬರುತ್ತಲೇ ಇರುತ್ತವೆ. ಕಾಲ ನಮ್ಮ ಜೊತೆ ಆಟವಾಡುತ್ತದೆ. ಆಯಸ್ಸು ಕಳೆಯುತ್ತಲೇ ಇರುತ್ತದೆ. ಆದರೂ ಆಸೆಯು ನಮ್ಮನ್ನು ಬಿಡುವದಿಲ್ಲ. |
| ದ್ವಾದಶಮಂಜರಿಕಾಭಿರಶೇಷಃ ಕಥಿತೋ ವೈಯಾಕರಣಸ್ಯೈಷಃ . ಉಪದೇಶೋಽಭೂದ್ವಿದ್ಯಾನಿಪುಣೈಃ ಶ್ರೀಮಚ್ಛಂಕರಭಗವಚ್ಛರಣೈಃ .. 13.. | ಹನ್ನೆರಡು ಹೂವಗಳಿರುವ ಈ ಹೂಗುಚ್ಛವು ವ್ಯಾಕರಣನಿಪುಣ, ವಿದ್ಯಾದಿನಿಪುಣರಾದ ಶ್ರೀಮತ್ ಶಂಕರರಿಂದ ಉಪದೇಶಿಸಲ್ಪಟ್ಟಿದೆ. |
| ಕಾ ತೇ ಕಾಂತಾ ಧನಗತಚಿಂತಾ ವಾತುಲ ಕಿಂ ತವ ನಾಸ್ತಿ ನಿಯಂತಾ . ತ್ರಿಜಗತಿ ಸಜ್ಜನಸಂಗತಿರೇಕಾ ಭವತಿ ಭವಾರ್ಣವತರಣೇ ನೌಕಾ .. 13.. | ಯಾಕೆ ಹೆಂಡತಿ, ಧನಕನಕದ ಬಗ್ಗೆ ಚಿಂತೆ ಮಾಡುವೆ? ನಿನಗೆ ದಾರಿ ತೋರಿಸುವರಾರೂ ಇಲ್ಲವೆ? ತ್ರಿಜಗದಲ್ಲಿ ನಿನ್ನನ್ನು ಸಂಸಾರ ಸಾಗರದಿಂದ ಪಾರು ಮಾಡುವ ನೌಕೆಯೆಂದರೆ, ಸಜ್ಜನರ ಸಂಗ ಒಂದೇ. |
| ಜಟಿಲೋ ಮುಂಡೀ ಲುಂಛಿತಕೇಶಃ ಕಾಷಾಯಾಂಬರಬಹುಕೃತವೇಷಃ . ಪಶ್ಯನ್ನಪಿ ಚ ನ ಪಶ್ಯತಿ ಮೂಢೋ ಹ್ಯುದರನಿಮಿತ್ತಂ ಬಹುಕೃತವೇಷಃ .. 14.. | ಕೆಲವರು ಕೂದಲನ್ನು ಜಡೆಗಟ್ಟಿಸಿಕೊಂಡರೆ, ಇನ್ನು ಕೆಲವರು ತಲೆಯ ಕೂದಲನ್ನು ಪೂರ್ತಿ ತೆಗೆಯುತ್ತಾರೆ. ಕಾವಿ ಬಟ್ಟೆ ಹಾಕಿಕೊಳ್ಳುತ್ತಾರೆ. ಚಿತ್ರ ವಿಚಿತ್ರ ವೇಷ ಮಾಡಿಕೊಳ್ಳುತ್ತಾರೆ - ಎಲ್ಲಾ ಹೊಟ್ಟೆಪಾಡಿಗಾಗಿ ಬಹುವೇಷ. ಇದನ್ನು ನೋಡಿಯೂ ಮೂಢರು ಅರ್ಥ ಮಾಡಿಕೊಳ್ಳುವದಿಲ್ಲ. |
| ಅಂಗಂ ಗಲಿತಂ ಪಲಿತಂ ಮುಂಡಂ ದಶನವಿಹೀನಂ ಜಾತಂ ತುಂಡಂ . ವೃದ್ಧೋ ಯಾತಿ ಗೃಹೀತ್ವಾ ದಂಡಂ ತದಪಿ ನ ಮುಂಚತ್ಯಾಶಾಪಿಂಡಂ .. 15.. | ಅಂಗಗಳು ಶಕ್ತಿಹೀನವಾಗಿವೆ. ತಲೆಯ ಕೂದಲೆಲ್ಲಾ ಉದುರಿದೆ. ಹಲ್ಲುಗಳೆಲ್ಲಾ ಬಿದ್ದು ಹೋಗಿವೆ. ಇಷ್ಟಾದರೂ ಮನುಷ್ಯನು ಆಸೆಯನ್ನು ಬಿಡುತ್ತಿಲ್ಲ. |
ಅಗ್ರೇ ವಹ್ನಿಃ ಪೃಷ್ಠೇ ಭಾನುಃ ರಾತ್ರೌ ಚುಬುಕಸಮರ್ಪಿತಜಾನುಃ . ಕರತಲಭಿಕ್ಷಸ್ತರುತಲವಾಸ- ಸ್ತದಪಿ ನ ಮುಂಚತ್ಯಾಶಾಪಾಶಃ .. 16.. | ಮುಂದೆ ಅಗ್ನಿ , ಹಿಂದೆ ಸೂರ್ಯ, ರಾತ್ರಿ ಕಾಲನ್ನು ಮುದುಡಿಕೊಂಡಿದ್ದಾನೆ (ಛಳಿಯಿಂದ). ಭಿಕ್ಷ ಬೇಡುವ ಕೈ, ಮರದ ಕೆಳಗೆ ವಾಸ. ಇಷ್ಟಾದರೂ ಆಸೆಯ ಪಾಶ ಬಿಡುತ್ತಿಲ್ಲ. |
| ಕುರುತೇ ಗಂಗಾಸಾಗರಗಮನಂ ವ್ರತಪರಿಪಾಲನಮಥವಾ ದಾನಂ . ಜ್ಞಾನವಿಹೀನಃ ಸರ್ವಮತೇನ ಮುಕ್ತಿಂ ನ ಭಜತಿ ಜನ್ಮಶತೇನ .. 17.. | ಮನುಷ್ಯನು ಗಂಗಾಸಾಗರ ಹೋಗಬಹುದು. ನೂರು ವ್ರತ ಮಾಡಬಹುದು. ಬೇಕಾದಷ್ಟು ದಾನ ಮಾಡಬಹುದು. ಆದರೆ ನೈಜ ಜ್ಞಾನವಿಲ್ಲದಿದ್ದರೆ ಅವನಿಗೆ ನೂರು ಜನ್ಮಗಳಲ್ಲೂ ಮುಕ್ತಿ ದೊರಕುವದಿಲ್ಲ. |
| ಭಗವದ್ಗೀತಾ ಕಿಂಚಿದಧೀತಾ ಗಂಗಾಜಲಲವಕಣಿಕಾ ಪೀತಾ . ಸಕೃದಪಿ ಯೇನ ಮುರಾರಿಸಮರ್ಚಾ ಕ್ರಿಯತೇ ತಸ್ಯ ಯಮೇನ ನ ಚರ್ಚಾ .. 20.. | ಯಾರು ಸ್ವಲ್ಪ ಮಾತ್ರ ಭಗವದ್ಗೀತೆಯನ್ನು ಓದಿ, ಒಂದು ಹನಿ ಗಂಗಾಜಲ ಕುಡಿದು, ಒಂದು ಸಾರಿ ಮುರಾರಿಯ ನಾಮಸ್ಮರಣೆ ಮಾಡುತ್ತಾರೋ, ಅವರ ಕಡೆ ಯಮ ತಿರುಗಿ ಕೂಡ ನೋಡುವದಿಲ್ಲ. |
| ಪುನರಪಿ ಜನನಂ ಪುನರಪಿ ಮರಣಂ ಪುನರಪಿ ಜನನೀಜಠರೇ ಶಯನಂ . ಇಹ ಸಂಸಾರೇ ಬಹುದುಸ್ತಾರೇ ಕೃಪಯಾಽಪಾರೇ ಪಾಹಿ ಮುರಾರೇ .. 21.. | ಮತ್ತೆ ಜನನ, ಮತ್ತೆ ಮರಣ, ಮತ್ತೆ ತಾಯಿಯ ಹೊಟ್ಟೆಯಲ್ಲಿ ಶಯನ. ಈ ಸಂಸಾರ ಸಾಗರ ದಾಟುವದು ಬಹಳ ಕಷ್ಟ. ಮುರಾರೀ, ನನ್ನನ್ನು ಇದರಿಂದ ಪಾರು ಮಾಡು. |
ರಥ್ಯಾಚರ್ಪಟವಿರಚಿತಕಂಥಃ | ರಸ್ತೆಯಲ್ಲಿ ಬಿದ್ದಿರುವ ಹರಿದ ಬಟ್ಟೆ ಧರಿಸಿ, ಪುಣ್ಯ ಪಾಪಗಳನ್ನು ತ್ಯಜಿಸಿ, ದೈವಯೋಗದಲ್ಲೇ ಚಿತ್ತವನ್ನು ಲೀನ ಮಾಡಿದವನು ಉನ್ಮತ್ತನಾದ ಮಗುವಿನಂತೆ ಸಂತೋಷದಲ್ಲಿರುತ್ತಾನೆ. |
| ಕಸ್ತ್ವಂ ಕೋಽಹಂ ಕುತ ಆಯಾತಃ ಕಾ ಮೇ ಜನನೀ ಕೋ ಮೇ ತಾತಃ . ಇತಿ ಪರಿಭಾವಯ ಸರ್ವಮಸಾರಂ ವಿಶ್ವಂ ತ್ಯಕ್ತ್ವಾ ಸ್ವಪ್ನವಿಚಾರಂ .. 23.. | ಎಲ್ಲವೂ ಅರ್ಥಹೀನ ಎಂದು ಅರಿತು, ಸ್ವಪ್ನವಾಗಿರುವ ಈ ಜಗತ್ತನ್ನು ತ್ಯಜಿಸಿ "ನೀನು ಯಾರು, ನಾನು ಯಾರು? ಎಲ್ಲಿಂದ ಬಂದೆ? ನನ್ನ ಜನನಿ ಯಾರು? ತಂದೆ ಯಾರು" ಎಂಬುದನ್ನು ವಿಚಾರ ಮಾಡು. |
ತ್ವಯಿ ಮಯಿ ಚಾನ್ಯತ್ರೈಕೋ ವಿಷ್ಣು- ರ್ವ್ಯರ್ಥಂ ಕುಪ್ಯಸಿ ಮಯ್ಯಸಹಿಷ್ಣುಃ . ಭವ ಸಮಚಿತ್ತಃ ಸರ್ವತ್ರ ತ್ವಂ ವಾಂಛಸ್ಯಚಿರಾದ್ಯದಿ ವಿಷ್ಣುತ್ವಂ .. 24.. | ನಿನ್ನಲ್ಲಿ, ನನ್ನಲ್ಲಿ ಎಲ್ಲರಲ್ಲೂ ಇರುವವನು ಒಬ್ಬನೇ ವಿಷ್ಣು. ಸುಮ್ಮನೇ ಕೋಪ, ಅಸಹನೆ ಯಾಕೆ? ನಿನಗೆ ಅಚಿರ ವಿಷ್ಣುತ್ವ ಬೇಕೆಂದರೆ ಎಲ್ಲ ಕಡೆ ಸಮಭಾವದಿಂದಿರು. |
| ಶತ್ರೌ ಮಿತ್ರೇ ಪುತ್ರೇ ಬಂಧೌ ಮಾ ಕುರು ಯತ್ನಂ ವಿಗ್ರಹಸಂಧೌ . ಸರ್ವಸ್ಮಿನ್ನಪಿ ಪಶ್ಯಾತ್ಮಾನಂ ಸರ್ವತ್ರೋತ್ಸೃಜ ಭೇದಾಜ್ಞಾನಂ .. 25.. | ಶತ್ರುಗಳು ಮಿತ್ರರು, ಬಂಧುಗಳು, ಮಕ್ಕಳು ಎಂದು ಭೇದ ಅಥವಾ ಸಂಧಿ ಮಾಡಲು ನೋಡಬೇಡ. ಎಲ್ಲರಲ್ಲೂ ನಿನ್ನನ್ನೇ ನೋಡು. ಎಲ್ಲಾ ಕಡೆ ಭೇದಜ್ಞಾನವನ್ನು ತ್ಯಜಿಸು. |
ಕಾಮಂ ಕ್ರೋಧಂ ಲೋಭಂ ಮೋಹಂ | ಕಾಮ, ಕ್ರೋಧ, ಲೋಭ, ಮೋಹಗಳನ್ನು ತ್ಯಜಿಸಿ ಆತ್ಮವನ್ನು ಅರಿಯಲು ಪ್ರಯತ್ನಿಸು - ನಾನು ಯಾರು ಎಂದು ಚಿಂತೆ ಮಾಡು. ಆತ್ಮಜ್ಞಾನವಿಲ್ಲದ ಮೂಢರು ನರಕದಲ್ಲಿ ನರಳುತ್ತಾರೆ. |
| ಗೇಯಂ ಗೀತಾನಾಮಸಹಸ್ರಂ ಧ್ಯೇಯಂ ಶ್ರೀಪತಿರೂಪಮಜಸ್ರಂ . ನೇಯಂ ಸಜ್ಜನಸಂಗೇ ಚಿತ್ತಂ ದೇಯಂ ದೀನಜನಾಯ ಚ ವಿತ್ತಂ .. 27.. | ಗೀತಾನಾಮವನ್ನು ಸಹಸ್ರ ಬಾರಿ ಹಾಡು. ವಿಷ್ಣುವಿನ ರೂಪವನ್ನು ಯಾವಾಗಲೂ ಧ್ಯಾನಿಸು. ಸಜ್ಜನರ ಸಂಗವನ್ನು ಮಾಡು. ದೀನ ದುರ್ಬಲರಿಗೆ ಧನಸಹಾಯ ಮಾಡು. |
ಸುಖತಃ ಕ್ರಿಯತೇ ರಾಮಾಭೋಗಃ | ಸಂತೋಷಕ್ಕಾಗಿ ವಿಷಯಸುಖಗಳಲ್ಲಿ ಮುಳಗಿದರೆ, ನಂತರ ಶರೀರ ರೋಗಗ್ರಸ್ತವಾಗುತ್ತದೆ. ಲೋಕದಲ್ಲಿ ಮರಣವೆ ಶರಣು ಎಂಬುದು ತಿಳಿದಿದ್ದರೂ ಪಾಪಾಚರಣೆಯನ್ನು ಬಿಡುವದಿಲ್ಲ. |
ಅರ್ಥಮನರ್ಥಂ ಭಾವಯ ನಿತ್ಯಂ | ಧನವೇ ಯಾವಾಗಲೂ ಅನರ್ಥಕ್ಕೆ ಕಾರಣ. ಅದರಿಂದ ಸ್ವಲ್ಪವೂ ಸುಖವಿಲ್ಲ ಎಂಬುದು ಸತ್ಯ. ಧನ ಇದ್ದವನಿಗೆ ಸ್ವಂತ ಮಗನ ಕಂಡರೂ ಭಯ. ಇದು ಎಲ್ಲ ಕಡೆ ನಡೆಯತ್ತಿರುವ ರೀತಿ. |
ಪ್ರಾಣಾಯಾಮಂ ಪ್ರತ್ಯಾಹಾರಂ | ಪ್ರಾಣಾಯಾಮ, ಪ್ರತ್ಯಾಹಾರ (ಬಾಹ್ಯ ವಸ್ತುಗಳಿಂದ ಮನಸ್ಸನ್ನ್ನು ದೂರ ಇಡುವದು) , ನಿತ್ಯ ಅನಿತ್ಯಗಳ ವಿವೇಚನೆ ಮಾಡುವದು, ಧ್ಯಾನ , ಜಪ ಇತ್ಯಾದಿಗಳನ್ನು ಮಾಡುವದು. ಇವನ್ನು ಬಹಳ ನಿಷ್ಠೆಯಿಂದ, ಕಾಳಜಿಯಿಂದ ಮಾಡು. |
ಗುರುಚರಣಾಂಬುಜನಿರ್ಭರಭಕ್ತಃ ಸಂಸಾರಾದಚಿರಾದ್ಭವ ಮುಕ್ತಃ . ಸೇಂದ್ರಿಯಮಾನಸನಿಯಮಾದೇವಂ ದ್ರಕ್ಷ್ಯಸಿ ನಿಜಹೃದಯಸ್ಥಂ ದೇವಂ .. 31.. | ಗುರುಚರಣಾಂಬಜ ಸೇವೆಯನ್ನು ಮಾಡಿ, ಸಂಸಾರ ಸಾಗರದಿಂದ ಮುಕ್ತನಾಗೆ. ಇಂದ್ರಿಯ, ಮನಸ್ಸುಗಳನ್ನು ನಿಯಂತ್ರಣ ಮಾಡಿ, ಹೃದಯಸ್ಥನಾದ ದೇವರನ್ನು ನೀನು ನೋಡುವೆ. |
Comments
Post a Comment