Posts

ಶಿವಮಾನಸ ಪೂಜಾ

ರತ್ನೈಃ ಕಲ್ಪಿತಮಾಸನಂ ಹಿಮಜಲೈಃ ಸ್ನಾನಂ ಚ ದಿವ್ಯಾಂಬರಂ ನಾನಾರತ್ನವಿಭೂಷಿತಂ ಮೃಗಮದಾಮೋದಾಂಕಿತಂ ಚಂದನಂ . ಜಾತೀಚಂಪಕಬಿಲ್ವಪತ್ರರಚಿತಂ ಪುಷ್ಪಂ ಚ ಧೂಪಂ ತಥಾ ದೀಪಂ ದೇವ ದಯಾನಿಧೇ ಪಶುಪತೇ ಹೃತ್ಕಲ್ಪಿತಂ ಗೃಹ್ಯತಾಂ .. 1.. ರತ್ನಗಳಿಂದ ಅಲಂಕೃತವಾದ ಆಸನವನ್ನು ನಿನಗೆ ಅರ್ಪಿಸುವೆನು. ಸ್ನಾನಕ್ಕಾಗಿ ಹಿಮಾಲಯದ ಜಲವನ್ನು, ದಿವ್ಯ ಬಟ್ಟೆಯನ್ನು, ನಾನಾ ರತ್ನಗಳಿಂದ ಅಲಂಕರಿಸಲ್ಪಟ್ಟ , (ದಿವ್ಯ ಬಟ್ಟೆಯನ್ನು ಅರ್ಪಿಸುವೆನು), ಕಸ್ತೂರಿಯನ್ನು ಮತ್ತು ಚಂದನವನ್ನು ಲೇಪಿಸುವೆನು ಮಲ್ಲಿಗೆ, ಸಂಪಿಗೆ, ಬಿಲ್ವ ಪತ್ರೆ ಇತ್ಯಾದಿ ಹೂವುಗಳನ್ನು ಅರ್ಪಿಸುವೆನು. ಧೂಪವನ್ನು ಹಚ್ಚುವೆನು. ದೀಪವನ್ನು ಹಚ್ಚುವೆನು. ಪಶುಪತಿಯೇ, ದಯಾನಿಧಿಯೇ, ನನ್ನ ಹೃದಯದಿಂದ ಕಲ್ಪಿತವಾದ ಇವೆಲ್ಲವುಗಳನ್ನು ದಯವಿಟ್ಟು ಸ್ವೀಕರಿಸು. ಸೌವರ್ಣೇ ನವರತ್ನಖಂಡರಚಿತೇ ಪಾತ್ರೇ ಘೃತಂ ಪಾಯಸಂ ಭಕ್ಷ್ಯಂ ಪಂಚವಿಧಂ ಪಯೋದಧಿಯುತಂ ರಂಭಾಫಲಂ ಪಾನಕಂ . ಶಾಕಾನಾಮಯುತಂ ಜಲಂ ರುಚಿಕರಂ ಕರ್ಪೂರಖಂಡೋಜ್ಜ್ವಲಂ ತಾಂಬೂಲಂ ಮನಸಾ ಮಯಾ ವಿರಚಿತಂ ಭಕ್ತ್ಯಾ ಪ್ರಭೋ ಸ್ವೀಕುರು .. 2.. ಚಿನ್ನದ, ನವರತ್ನಗಳಿಂದ ಅಲಂಕರಿಸಲ್ಪಟ್ಟ ಪಾತ್ರೆಯಲ್ಲಿ ನಾನು ನಿನಗೆ ಘ್ರತವನ್ನು (ತುಪ್ಪವನ್ನು) ಮತ್ತು ಪಾಯಸವನ್ನು ಅರ್ಪಿಸುವೆನು. ಪಯ (ಹಾಲು), ಮೊಸರು ಬಾಳೆಹಣ್ಣನ್ನು ಒಳಗೊಂಡ ಪಂಚವಿಧವಾದ ಭಕ್ಷ್ಯವನ್ನು ಅರ್ಪಿಸುವೆನು. ಹಣ್ಣು ತರಕಾರಿಗಳನ್ನೊಳಗೊಂಡ ರುಚಿಕರವಾದ ಜಲ ಮತ್ತು ಪಾನಕವನ್ನು ನಿನಗ...

ಕಠೋಪನಿಷತ್ - ಪ್ರಥಮಾಧ್ಯಾಯ ಪ್ರಥಮಾ ವಲ್ಲೀ

 ಕಠೋಪನಿಷತ್ ಪ್ರಮುಖ ಉಪನಿಷತ್ತುಗಳಲ್ಲಿ ಒಂದು.  ಈ ಉಪನಿಷತ್ತು ಆತ್ಮ, ಬ್ರಹ್ಮ ಮತ್ತು ಮುಕ್ತಿಯ ಕುರಿತಾಗಿ ನಚಿಕೇತ ಎಂಬ ಬಾಲಕ ಮತ್ತು ಯಮನ ಮಧ್ಯ  ನಡೆಯುವ ಸಂಭಾಷಣೆಯ ರೂಪದಲ್ಲಿದೆ.  ಭಾರತಿಯ ತತ್ವಜ್ಞಾನದ ಕೃತಿಗಳ ಪೈಕಿ ಪ್ರಸಿದ್ಧವಾಗಿರುವ ಈ ಕೃತಿಯನ್ನು ಬಹಳಷ್ಟು ಜನ ಪಾಶ್ಚಾತ್ಯ ವಿದ್ವಾಂಸರೂ ಕೂಡ ಅಧ್ಯಯಸಿದ್ದಾರೆ. ಕ್ರಿ.ಶ. ಹದಿನೇಳನೇ ಶತಮಾನದಲ್ಲಿ ಪರ್ಶಿಯನ್ ಭಾಷೆಗೆ ಅನುವಾದವಾದ ಈ ಕೃತಿ ನಂತರ ಲ್ಯಾಟಿನ್ ಭಾಷೆಯಲ್ಲಿ ಅನುವಾದಗೊಂಡು ಯುರೋಪಿನಲ್ಲೆಲ್ಲ ಹಬ್ಬಿಕೊಂಡಿತು. ಪ್ರಸಿದ್ಧ ಕವಿ ಎಡ್ವಿನ್ ಆರ್ನಾಲ್ಡ್ ಈ ಉಪನಿಷತ್ತನ್ನು ಕಾವ್ಯ ರೂಪದಲ್ಲಿ ಬರೆದರೆ (The secret of Death), ರಾಲ್ಫ್ ವಾಲ್ಡೋ ಎಮರ್ಸನ್ ಈ ಉಪನಿಷತ್ತಿನ ಮೇಲೆ ಇಮ್ಮೊರ್ಟಾಲಿಟಿ ಎಂಬ ಪ್ರಬಂಧವನ್ನು ಬರೆದಿದ್ದಾರೆ.    ಕಠೋಪನಿಷತ್     ಓಂ   .. ಅಥ ಕಠೋಪನಿಷದ್ .. ಓಂ ಸಹ ನಾವವತು . ಸಹ ನೌ ಭುನಕ್ತು . ಸಹವೀರ್ಯಂ ಕರವಾವಹೈ . ತೇಜಸ್ವಿ ನಾವಧೀತಮಸ್ತು . ಮಾ ವಿದ್ವಿಷಾವಹೈ .. ಓಂ ಶಾಂತಿಃ ಶಾಂತಿಃ ಶಾಂತಿಃ ..     ಓಂ , ಜೊತೆಯಲ್ಲಿ ನಾವು ಹೋಗೋಣ. ಜೊತೆಯಲ್ಲಿ ನಾವು ಆನಂದಿಸೋಣ. ಜೊತೆಯಲ್ಲಿ ರಭಸದಿಂದ ವಿದ್ಯಾಭ್ಯಾಸವನ್ನು ಮಾಡೋಣ.  ನಮ್ಮ ವಿದ್ಯೆ ತೇಜೋಮಯವಾಗಲಿ. ದ್ವೇಷಕ್ಕೆ ಕಾರಣವಾಗದಿರಲಿ. ಓಂ ಶಾಂತಿಃ ಶಾಂತಿಃ ಶಾಂತಿಃ ..             Part ...

ಆತ್ಮ ಷಟ್ಕ - ನಿರ್ವಾಣ ಷಟ್ಕ

  ಆತ್ಮಷಟ್ಕಂ   ಮನೋಬುದ್ಧ್ಯಹಂಕಾರಚಿತ್ತಾನಿ ನಾಹಂ  ನ ಚ ಶ್ರೋತ್ರಜಿಹ್ವೇ ನ ಚ ಘ್ರಾಣನೇತ್ರೇ . ನ ಚ ವ್ಯೋಮಭೂಮಿರ್ನ ತೇಜೋ ನ ವಾಯು- ಶ್ಚಿದಾನಂದರೂಪಃ ಶಿವೋಽಹಂ ಶಿವೋಽಹಂ .. 1..   ನ ಚ ಪ್ರಾಣಸಂಜ್ಞೋ ನ ವೈ ಪಂಚವಾಯು ನ  ವಾ ಸಪ್ತಧಾತುರ್ನ ವಾ ಪಂಚಕೋಶಃ . ನ ವಾಕ್ಪಾಣಿಪಾದೌ ನ ಚೋಪಸ್ಥಪಾಯು ಚಿದಾನಂದರೂಪಃ ಶಿವೋಽಹಂ ಶಿವೋಽಹಂ .. 2..     ನ ಮೇ ದ್ವೇಷರಾಗೌ ನ ಮೇ ಲೋಭಮೋಹೌ  ಮದೋ ನೈವ ಮೇ ನೈವ ಮಾತ್ಸರ್ಯಭಾವಃ .  ನ ಧರ್ಮೋ ನ ಚಾರ್ಥೋ ನ ಕಾಮೋ ನ ಮೋಕ್ಷ ಚಿದಾನಂದರೂಪಃ ಶಿವೋಽಹಂ ಶಿವೋಽಹಂ .. 3..   ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖಂ  ನ ಮಂತ್ರೋ ನ ತೀರ್ಥಂ ನ ವೇದಾ ನ ಯಜ್ಞಾಃ . ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ  ಚಿದಾನಂದರೂಪಃ ಶಿವೋಽಹಂ ಶಿವೋಽಹಂ .. 4.. ನ ಮೃತ್ಯುರ್ನ ಶಂಕಾ ನ ಮೇ ಜಾತಿಭೇದಃ  ಪಿತಾ ನೈವ ಮೇ ನೈವ ಮಾತಾ ನ ಜನ್ಮ . ನ ಬಂಧುರ್ನ ಮಿತ್ರಂ ಗುರುರ್ನೈವ ಶಿಷ್ಯ ಚಿದಾನಂದರೂಪಃ ಶಿವೋಽಹಂ ಶಿವೋಽಹಂ .. 5.. ಅಹಂ ನಿರ್ವಿಕಲ್ಪೋ ನಿರಾಕಾರರೂಪೋ  ವಿಭುರ್ವ್ಯಾಪ್ಯ ಸರ್ವತ್ರ ಸರ್ವೇಂದ್ರಿಯಾಣಾಂ .  ಸದಾ ಮೇ ಸಮತ್ವಂ ನ ಮುಕ್ತಿರ್ನ ಬಂಧ ಚಿದಾನಂದರೂಪಃ ಶಿವೋಽಹಂ ಶಿವೋಽಹಂ .. 6..             .. ಇತಿ ಶ್ರೀಮಚ್ಛಂಕರಾಚಾರ್ಯವಿರಚಿತಂ ಆತ್ಮಷಟ್ಕಂ ಸಂಪೂರ್ಣಂ .....

ಭಜ ಗೋವಿಂದಂ

ಆದಿ ಶಂಕರಾಚಾರ್ಯರು ರಚಿಸಿದ ಈ ಜನಪ್ರಿಯ ಶ್ಲೋಕವನ್ನು ಮೋಹ ಮುದ್ಗರ (ಮುದ್ಗರ - ಸುತ್ತಿಗೆ) ಎಂದೂ ಕರೆಯುತ್ತಾರೆ. ಒಂದು ಕತೆಯ ಪ್ರಕಾರ ಒಂದು ದಿನ ಶಂಕರಾಚಾರ್ಯರು ರಸ್ತೆಯಲ್ಲಿ ಹೋಗುತ್ತಿದ್ದಾಗ ಒಬ್ಬ ವೃದ್ಧನು ವಿದ್ಯಾರ್ಥಿಗಳಿಗೆ ಕಲಿಸಲೆಂದು ವ್ಯಾಕರಣವನ್ನು ಉರು ಹಾಕುತ್ತಿದ್ದ. ಅದನ್ನು ನೋಡಿದ ಶಂಕರಾಚಾರ್ಯರು ಅವನಿಗೆ ಈ ವಯಸ್ಸಿನಲ್ಲಿ ವ್ಯಾಕರಣ ಕಲಿಯುವ ಬದಲು ದೇವರ ಧ್ಯಾನದಲ್ಲಿ ಮನಸ್ಸನ್ನು ತೊಡಗಿಸಲು ಹೇಳಿದರು. ಈ ಸಮಯದಲ್ಲಿಯೇ ಭಜಗೋವಿಂದ ರಚಿಸಿದರು ಎಂಬ ಪ್ರತೀತಿ ಇದೆ.   ಭಜ ಗೋವಿಂದಂ ಭಜ ಗೋವಿಂದಂ ಗೋವಿಂದಂ ಭಜ ಮೂಢಮತೇ . ಸಂಪ್ರಾಪ್ತೇ ಸನ್ನಿಹಿತೇ ಕಾಲೇ ನಹಿ ನಹಿ ರಕ್ಷತಿ ಡುಕೃಂಕರಣೇ .. 1.. ಭಜ - ಭಜಿಸು   ಗೋವಿಂದಂ - ಗೋವಿಂದಂ   ಮೂಢಮತೆ - ಮೂಢಬುದ್ಧಿಯವನೇ   ಸಂಪ್ರಾಪ್ತೇ - ಪ್ರಾಪ್ತವಾದಾಗ   ಸನ್ನಿಹತೇ - ಹತ್ತಿರ ಬಂದಾಗ   ನಹಿ ರಕ್ಷತಿ - ರಕ್ಷಿಸುವದಿಲ್ಲ    ಡುಕೃಂಕರಣೆ - ವ್ಯಾಕರಣ ಜ್ಞಾನ ಮೂಢಮತಿಯೇ, ಗೋವಿಂದನನ್ನು ಭಜಿಸು,  ಗೋವಿಂದನನ್ನು ಭಜಿಸು. ಮರಣ ಕಾಲ ಬಂದಾಗ ನಿನ್ನ ವ್ಯಾಕರಣ ಜ್ಞಾನ  (ಪುಸ್ತಕ ಜ್ಞಾನ) ನಿನ್ನನ್ನು ರಕ್ಷಿಸುವದಿಲ್ಲ.  ಮೂಢ ಜಹೀಹಿ ಧನಾಗಮತೃಷ್ಣಾಂ ಕುರು ಸದ್ಬುದ್ಧಿಂ ಮನಸಿ ವಿತೃಷ್ಣಾಂ . ಯಲ್ಲಭಸೇ ನಿಜಕರ್ಮೋಪಾತ್ತಂ ವಿತ್ತಂ ತೇನ ವಿನೋದಯ ಚಿತ್ತಂ .. 2.. ಜಹೀಹಿ - ತ್ಯಜಿಸು  ಧನ ಆಗಮ - ದುಡ್ಡು ಬರಬೇಕು ...

ರಾಮಾಯಣದ ಕೊಂಡಿಗಳು

 ರಾಮಾಯಣ ಮತ್ತು ಅದಕ್ಕೆ ಸಂಬಂಧಿಸದಂತೆ ಲೇಖನಗಳು ಅಂತರ್ಜಾಲದಲ್ಲಿ ಹೇರಳವಾಗಿ ಸಿಗುತ್ತವೆ.  ವಾಲ್ಮೀಕಿ ರಾಮಾಯಣ - ಈ ಕೊಂಡಿಯಲ್ಲಿ ಶ್ಲೋಕಗಳು ಮತ್ತು ಇಂಗ್ಲಿಷ್ ಶಬ್ದಾರ್ಥ ಮತ್ತು ಇಂಗ್ಲಿಷ್ ಅನುವಾದಗಳಿವೆ. ಸ್ತೋತ್ರ ನಿಧಿ - ವಾಲ್ಮೀಕಿ ರಾಮಾಯಣದ ಶ್ಲೋಕಗಳು ಕನ್ನಡ, ತಮಿಳು, ತೆಲುಗು ಮತ್ತು ದೇವನಾಗರಿಯಲ್ಲಿ ಲಭ್ಯವಿದೆ. ವಿಕಿಪೀಡಿಯ - ವಿಕೀಪೀಡಿಯ ರಾಮಾಯಣ ಲೇಖನ - ಉಪಯುಕ್ತ ಲಿಂಕುಗಳಿವೆ. ರಿಸ್ಟಿನ್ ಡಾಟ್ ಕಾಮ್ - ಚಿತ್ರಗಳಲ್ಲಿ ರಾಮಾಯಣ.  ಆರ್ಕೈವ್ ಡಾಟ್ ಓಆರ್ ಜಿ -  ಇದರಲ್ಲಿ ಮೂಲ ಸಂಸ್ಕೃತ ಶ್ಲೋಕ ಮತ್ತು ಕನ್ನಡ ವ್ಯಾಖ್ಯಾನಗಳೊಂದಿಗೆ ಭಾರತ ಪ್ರಕಾಶನದ ರಾಮಾಯಣ ಪಿ.ಡಿ.ಎಫ್. ರೂಪದಲ್ಲಿ ಲಭ್ಯವಿದೆ.  ಇನ್ನು ನಿಮಗೆ ಕುವೆಂಪು ವಿರಚಿತ ಶ್ರೀರಾಮಾಯಣ ದರ್ಶನ ಓದಬೇಕೆಂದರೆ ಕನ್ನಡದೀವಿಗೆ ಯನ್ನು ಭೇಟಿ ಮಾಡಿ.  

ದೇವ್ಯಪರಾಧ ಕ್ಷಮಾಪಣಾ ಸ್ತೋತ್ರ

ಶಂಕರಾಚಾರ್ಯರು ರಚಿಸಿದ ದೇವ್ಯಾಪರಾಧ ಕ್ಷಮಾಪಣಾ ಸ್ತೋತ್ರ  ನ ಮಂತ್ರಂ ನೋ ಯಂತ್ರಂ ತದಪಿ ಚ ನ ಜಾನೇ ಸ್ತುತಿ ಮಹೋ       ನಚಾಹ್ವಾನಮ್ ಧ್ಯಾನಂ ತದಪಿ ಚನಜಾನೆ ಸ್ತುತಿಕಥಾ | ನ ಜಾನೇ ಮುದ್ರಾಸ್ತೇ ತದಪಿ ಚನಜಾನೆ  ವಿಲಪನಂ      ಪರಂ ಜಾನೆ ಮಾತಾಸ್ತ್ವದನುಸರಣಂ ಕ್ಲೇಷಹರಣಂ|| ತಾಯೇ,  ನಿನ್ನ ಮಂತ್ರ ನನಗೆ ತಿಳಿದಿಲ್ಲ. ಯಂತ್ರವೂ ತಿಳಿದಿಲ್ಲ. ನಿನ್ನನ್ನು ಸ್ತುತಿಸಲು ತಿಳಿದಿಲ್ಲ. ಧ್ಯಾನ ಮಾಡಿ ನಿನ್ನನ್ನು ಆಹ್ವಾನಿಸಲು ನಾನು ತಿಳಿದಿಲ್ಲ. ನಿನ್ನ ಸ್ತುತಿ-ಕಥೆಗಳನ್ನು ಹೇಳಲೂ ಅರಿಯೆನು. ನಿನ್ನನ್ನು ಧ್ಯಾನಿಸುವ ಮುದ್ರೆಯನ್ನು ಸಹ ನಾನು ತಿಳಿಯೆನು.  ಏನೂ ಮಾಡದೇ ಸುಮ್ಮನೆ ಅಳಲೂ ಅರಿಯೆನು. ಆದರೆ ನಾನು ಒಂದು ಮಾತು ಮಾತ್ರ ನನಗೆ ತಿಳಿದಿದೆ - ನಿನ್ನನ್ನು ಅನುಸರಿಸಿದರೆ, ನಿನ್ನ ಕೃಪೆಯಿಂದ ನನ್ನ ದುಃಖ-ದುರಿತಗಳೆಲ್ಲವೂ ದೂರವಾಗುತ್ತವೆ.   ವಿಧೇರಾ ಧ್ಯಾನೇನ ದ್ರವಿಣವೀರಹೇಣಾಲಸತಯಾ       ವಿಧೇಯಾ ಶಕ್ಯತ್ವಾಂ ತವಚರಣಯೋರ್ಯಾ ಚ್ಯುತಿರಭೂತ್| ತದೇ ತತ್ ಕ್ಷಂತವ್ಯಂ ಜನನಿ ಸಕಲೋದ್ಧಾರಿಣಿ ಶಿವೆ     ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನಭವತಿ||   ಪೂಜೆಯ ವಿಧಿಗಳನ್ನು ತಿಳಿಯದೇ ಅಥವಾ ಹಣದ ಕೊರತೆಯಿಂದ ಅಥವಾ ನನ್ನ ಆಲಸಿತನದಿಂದ, ನಿನ್ನ ಚರಣಸೇವೆ ಮಾಡಲು ನನ್ನಿಂದ ಸ...

ತತ್ತ್ವಬೋಧ

Image
ತತ್ವಬೋಧ ಒಂದು ಸಂಸ್ಕ್ರತ ಪ್ರಕರಣ ಗ್ರಂ ಥ. ( ಪ್ರಕರಣ ಗ್ರಂಥವೆಂದರೆ ಪರಿಚಯಿಸುವ, ಪ್ರಾರಂಭಿಕ ಗ್ರಂಥ). ಆದಿಶಂಕರಾಚಾರ್ಯರಿಂದ ರಚಿತವಾಗಿರಬಹುದಾದ ಇದು ಗದ್ಯ ರೂಪದಲ್ಲಿದೆ. ತತ್ವಬೋಧವು ವೇದಾಂತದ ತತ್ವಗಳನ್ನು ಅತಿ ಸಂಕ್ಷಿಪ್ತವಾಗಿ ಸಂಭಾಷಣೆಯ ರೂಪದಲ್ಲಿ ಹೇಳುತ್ತದೆ. ಅಧ್ಯಾತ್ಮದ ಮುಖ್ಯ ಪದಗಳ ಅರ್ಥ ವಿವರಿಸುತ್ತದೆ. ಇದು 38 ಮುಖ್ಯ ಭಾಗಗಳನ್ನು ಹೊಂದಿ, ಒಟ್ಟು 103 ಪಂಕ್ತಿಗಳನ್ನು ಹೊಂದಿದೆ. ಇವುಗಳನ್ನು  ಐದು ವಿಭಾಗಗಳಲ್ಲಿ ಜೋಡಿಸಲಾಗಿದೆ: ಉಪೋದ್ಘಾತ (ಪರಿಚಯ) ಜೀವ ವಿಚಾರ ಆತ್ಮ ವಿಚಾರ ಸೃಷ್ಟಿ ವಿಚಾರ ಜೀವ ಈಶ್ವರ ವಿಚಾರ ಜ್ಞಾನಫಲ ಪ್ರಥಮ ಹಾಗೂ ಅಂತಿಮ ವಾಕ್ಯಗಳು ಮಾತ್ರ ಶ್ಲೋಕ ರೂಪದಲ್ಲಿವೆ. ಉಳಿದೆಲ್ಲ ಸಾಲುಗಳ ಗದ್ಯ ರೂಪದಲ್ಲಿವೆ. ಶ್ರೀಶಂಕರಭಗವತ್ಪಾದಾಚಾರ್ಯಪ್ರಣೀತಃ ಮಂಗಲಾಚರಣ   ವಾಸುದೇವೇಂದ್ರಯೋಗೀಂದ್ರಂ ನತ್ವಾ ಜ್ಞಾನಪ್ರದಂ ಗುರುಂ . ಮುಮುಕ್ಷೂಣಾಂ ಹಿತಾರ್ಥಾಯ ತತ್ತ್ವಬೋಧೋಭಿಧೀಯತೇ .. ಯೋಗಿಯರಲ್ಲಿ ಶ್ರೇಷ್ಠನಾದ, ಜ್ಞಾನವನ್ನು ನೀಡುವ ಆಧ್ಯಾತ್ಮಿಕ ಗುರು, ಭಗವಾನ್ ವಾಸುದೇವನಿಗೆ ನಾನು ನಮಸ್ಕರಿಸುತ್ತೇನೆ. ಮುಮುಕ್ಷುಗಳ (ಮುಕ್ತಿ ಬಯಸುವವರ) ಹಿತಾರ್ಥಕ್ಕಾಗಿ, ತತ್ವಬೋಧವನ್ನು ವಿವರಿಸಲಾಗುತ್ತಿದೆ. ಯಾವುದೇ ಶುಭ ಕಾರ್ಯವನ್ನು ನಾವು ಪ್ರಾರ್ಥನೆಯಿಂದ ಆರಂಭಿಸುತ್ತೇವಲ್ಲ.  ಈ ಪ್ರಾರ್ಥನೆಯೊಂದಿಗೆ ಲೇಖಕ ಹೇಳುತ್ತಿರುವದು ಏನೆಂದರೆ  "ಇದರ ಜ್ಞಾನದಿಂದ ನನಗೆ ಬಹಳ ಪ್ರಯೋಜನವಾಗಿದೆ. ಅದಕ್ಕಾಗಿ ನಾ...