Posts

ರಾಮರಕ್ಷಾ ಸ್ತೋತ್ರ

  ಶ್ರೀ ರಾಮ ರಕ್ಷಾ ಸ್ತೋತ್ರಂ ಓಂ ಅಸ್ಯ ಶ್ರೀ ರಾಮರಕ್ಷಾ ಸ್ತೋತ್ರಮಂತ್ರಸ್ಯ ಬುಧಕೌಶಿಕ ಋಷಿಃ ಶ್ರೀ ಸೀತಾರಾಮ ಚಂದ್ರೋದೇವತಾ ಅನುಷ್ಟುಪ್ ಛಂದಃ ಸೀತಾ ಶಕ್ತಿಃ ಶ್ರೀಮದ್ ಹನುಮಾನ್ ಕೀಲಕಂ ಶ್ರೀರಾಮಚಂದ್ರ ಪ್ರೀತ್ಯರ್ಥೇ ರಾಮರಕ್ಷಾ ಸ್ತೋತ್ರಜಪೇ ವಿನಿಯೋಗಃ ॥ ಈ ರಾಮರಕ್ಷಾ ಸ್ತೋತ್ರದ ಕರ್ತೃ ಬುದ್ಧ ಕೌಶಿಕ. ದೇವತೆ ಸೀತಾ ರಾಮಚಂದ್ರ. ಛಂದಸ್ಸು ಅನುಷ್ಟುಪ್. ಶಕ್ತಿ ಸೀತೆ, ಕೇಂದ್ರ ಕೀಲಕ ಹನುಮಂತ. ರಾಮಚಂದ್ರನ ಪ್ರೀತ್ಯರ್ಥವಾಗಿ ರಾಮರಕ್ಷಾ ಸ್ತೋತ್ರ ಜಪ ವಿನಿಯೋಗ ಮಾಡಲಾಗುತ್ತಿದೆ.. ಧ್ಯಾನಂ ಧ್ಯಾಯೇದಾಜಾನುಬಾಹುಂ ಧೃತಶರ ಧನುಷಂ ಬದ್ಧ ಪದ್ಮಾಸನಸ್ಥಂ ಪೀತಂ ವಾಸೋವಸಾನಂ ನವಕಮಲ ದಳಸ್ಪರ್ಥಿ ನೇತ್ರಂ ಪ್ರಸನ್ನಮ್ । ವಾಮಾಂಕಾರೂಢ ಸೀತಾಮುಖ ಕಮಲಮಿಲಲ್ಲೋಚನಂ ನೀರದಾಭಂ ನಾನಾಲಂಕಾರ ದೀಪ್ತಂ ದಧತಮುರು ಜಟಾಮಂಡಲಂ ರಾಮಚಂದ್ರಮ್ ॥ ಬಿಲ್ಲು ಬಾಣ ಹಿಡಿದು, ಕಮಲದ ಭಂಗಿಯಲ್ಲಿ ಕುಳಿತು, ಹಳದಿ ಬಟ್ಟೆಗಳನ್ನು ಧರಿಸಿ, ಕಮಲದ ದಳಗಳಿಗಿಂತ ಸುಂದರವಾಗಿ ಕಣ್ಣುಗಳನ್ನು ಹೊಂದಿರುವ, ಸಂತೋಷವಾಗಿರುವ, ಎಡಭಾಗದಲ್ಲಿ ಅಂದರೆ ಮಡಿಲಲ್ಲಿ ಕುಳಿತಿರುವ ಸೀತೆಯ ಕಮಲದ ಮುಖವನ್ನು ಸ್ಪರ್ಶಿಸುವ ಮತ್ತು ಮೋಡಗಳಂತೆ ಕಪ್ಪಾಗಿರುವ, ಉದ್ದನೆಯ ತೋಳುಗಳನ್ನು ಹೊಂದಿರುವ, ಜಡೆ ಕೂದಲುಳ್ಳ, ವಿವಿಧ ಆಭರಣಗಳಿಂದ ಅಲಂಕರಿಸಲ್ಪಟ್ಟ ಶ್ರೀ ರಾಮನನ್ನು ನಾನು ಧ್ಯಾನಿಸುತ್ತೇನೆ.   ಸ್ತೋತ್ರಂ ಚರಿತಂ ರಘುನಾಥಸ್ಯ ಶತಕೋಟಿ ಪ್ರವಿಸ್ತರಮ್ । ಏಕೈಕಮಕ್ಷರಂ ಪುಂಸಾಂ ಮಹಾಪಾತಕ ನಾ...

ನಾರಾಯಣೀ ಸ್ತುತಿಃ

ನಾರಾಯಣೀ ಸ್ತುತಿ ಅಥವಾ ದುರ್ಗಾದೇವಿ ಸ್ತುತಿಯು ತಾಯಿ ದುರ್ಗೆಯನ್ನು ಪೂಜಿಸುವ ಶ್ಲೋಕ. ಇದನ್ನು ದೇವೀ ಮಹಾತ್ಮೆಯ ೧೧ನೇ ಅಧ್ಯಾಯದಿಂದ ತೆಗೆದುಕೊಳ್ಳಲಾಗಿದೆ. ಈ ಶ್ಲೋಕವನ್ನು ದುರ್ಗಾಸಪ್ತಶತಿ ಅಥವಾ ಚಂಡೀಪಾಠ ಎಂದೂ ಹೇಳುತ್ತಾರೆ. ದುರ್ಗೆಯು  ನಾರಾಯಣನ ಸಹೋದರಿಯಾದದ್ದರಿಂದ ಅವಳನ್ನು  ನಾರಾಯಣೀ ಎಂದು ಕರೆಯುತ್ತಾರೆ.  ದೇವೀ ಮಾಹಾತ್ಮ್ಯೇ ಏಕಾದಶೋಽಧ್ಯಾಯಃ .. ಓಂ ಋಷಿರುವಾಚ .. ೧.. ದೇವ್ಯಾ ಹತೇ ತತ್ರ ಮಹಾಸುರೇಂದ್ರೇ ಸೇಂದ್ರಾಃ ಸುರಾ ವಹ್ನಿಪುರೋಗಮಾಸ್ತಾಂ  . ಕಾತ್ಯಾಯನೀಂ ತುಷ್ಟುವುರಿಷ್ಟಲಾಭಾದ್ ವಿಕಾಶಿವಕ್ತ್ರಾಬ್ಜವಿಕಾಶಿತಾಶಾಃ .. ೨.. ದೇವಿಯಿಂದ ಅಸುರರ ರಾಜನು ಹತನಾದ ನಂತರ, ಇಂದ್ರ ಮತ್ತು ಅಗ್ನಿಯ ಮತ್ತು ಇತರ ದೇವತೆಗಳು, ತಮ್ಮ ಇಷ್ಟಾರ್ಥಗಳನ್ನು ಪೂರೈಸಿದ್ದಕ್ಕಾಗಿ ಕಾತ್ಯಾಯನಿಯನ್ನು ಸ್ತುತಿಸಿದರು. ಭರವಸೆಗಳು ಈಡೇರಿದ್ದರಿಂದ, ಅವರ ಮುಖಗಳು ಪ್ರಕಾಶಮಾನವಾಗಿ ಅರಳಿದವು. ದೇವಿ ಪ್ರಪನ್ನಾರ್ತಿಹರೇ ಪ್ರಸೀದ ಪ್ರಸೀದ ಮಾತರ್ಜಗತೋಽಖಿಲಸ್ಯ . ಪ್ರಸೀದ ವಿಶ್ವೇಶ್ವರಿ ಪಾಹಿ ವಿಶ್ವಂ ತ್ವಮೀಶ್ವರೀ ದೇವಿ ಚರಾಚರಸ್ಯ .. ೩.. ಓ ದೇವಿ, ನಿನ್ನನ್ನು ಆಶ್ರಯಿಸುವವರ ದುಃಖಗಳನ್ನು ನಿವಾರಿಸುವವಳೇ,  ದಯೆ ತೋರು . ಅಖಿಲ ಜಗದ ತಾಯೇ, ದಯೆ ತೋರು. ಎಲ್ಲರ ಅಧಿಪತಿಯೇ,  ದಯೆ ತೋರು . ಸಕಲ ಚರಾಚರಗಳ  ಅಧಿಪತಿಯೇ, ಬ್ರಹ್ಮಾಂಡವನ್ನು ರಕ್ಷಿಸು. ಆಧಾರಭೂತಾ ಜಗತಸ್ತ್ವಮೇಕಾ ಮಹೀಸ್ವರೂಪೇಣ ಯತಃ ಸ್ಥಿತಾಸಿ . ಅ...

ಮಹಿಷಾಸುರಮರ್ದಿನಿ ಸ್ತೋತ್ರ

ಅಯಿ ಗಿರಿನಂದಿನಿ ನಂದಿತಮೇದಿನಿ ವಿಶ್ವವಿನೋದಿನಿ ನಂದನುತೇ   ಗಿರಿವರವಿಂಧ್ಯಶಿರೋಧಿನಿವಾಸಿನಿ ವಿಷ್ಣುವಿಲಾಸಿನಿ ಜಿಷ್ಣುನುತೇ . ಭಗವತಿ ಹೇ ಶಿತಿಕಂಠಕುಟುಂಬಿನಿ ಭೂರಿಕುಟುಂಬಿನಿ ಭೂರಿಕೃತೇ   ಜಯ ಜಯ ಹೇ ಮಹಿಷಾಸುರಮರ್ದಿನಿ ರಮ್ಯಕಪರ್ದಿನಿ ಶೈಲಸುತೇ .. ೧..  ಅಯಿ = ಹೇ ತಾಯೇ      ಗಿರಿನಂದಿನಿ = ಪರ್ವತಪುತ್ರಿ    ವಿಶ್ವವಿನೋದಿನಿ = ವಿಶ್ವವೇ ನಿನ್ನ ಆಟ  ನಂದನುತೇ - ನಂದಿಯಿಂದ ಪೂಜಿಸಲ್ಪಡುವವಳು ಗಿರಿವರ = ಅರಿಶ್ರೇಷ್ಠ ಪರ್ವತ ವಿಂಧ್ಯಶಿರೋಧಿನಿವಾಸಿನಿ = ವಿಂಧ್ಯಪರ್ವತ ಶಿಖರದ ಮೇಲೆ ವಾಸಿಸುವಳು   ವಿಷ್ಣುವಿಲಾಸಿನಿ = ವಿಷ್ಣುವಿಗೆ ವಿಲಾಸ ಕೊಡುವವಳು   ಜಿಷ್ಣುನುತೇ=ಇಂದ್ರನಿಂದ ಪೂಜಿಸಲ್ಪಡುವವಳು    ಶಿತಿಕಂಠ = ನೀಲಕಂಠ    ಕುಟುಂಬಿನಿ = ಪತ್ನಿ   ಭೂರಿಕುಟುಂಬಿನಿ= ಅಪಾರ ಕುಟುಂಬವನ್ನು ಹೊಂದಿದವಳು  ಭೂರಿಕೃತೇ = ಅಪಾರವನ್ನು ಸೃಷ್ಟಿಸಿದವಳು ಮಹಿಷಾಸುರಮರ್ದಿನಿ = ಮಹಿಷಾಸುರನನ್ನು ವಧಿಸಿದವಳು     ರಮ್ಯಕಪರ್ದಿನಿ = ರಮ್ಯ ಜಟೆಯವಳು ಶೈಲಸುತೆ =  ಪರ್ವತಪುತ್ರಿ ಸುರವರವರ್ಷಿಣಿ ದುರ್ಧರಧರ್ಷಿಣಿ ದುರ್ಮುಖಮರ್ಷಿಣಿ ಹರ್ಷರತೇ ತ್ರಿಭುವನಪೋಷಿಣಿ ಶಂಕರತೋಷಿಣಿ ಕಿಲ್ಬಿಷಮೋಷಿಣಿ ಘೋಷರತೇ . ದನುಜನಿರೋಷಿಣಿ ದಿತಿಸುತರೋಷಿಣಿ ದುರ್ಮದಶೋಷಿಣಿ ಸಿಂಧುಸುತೇ ಜಯ ಜಯ ಹೇ ಮಹಿಷಾಸು...

ಶಿವಮಾನಸ ಪೂಜಾ

ರತ್ನೈಃ ಕಲ್ಪಿತಮಾಸನಂ ಹಿಮಜಲೈಃ ಸ್ನಾನಂ ಚ ದಿವ್ಯಾಂಬರಂ ನಾನಾರತ್ನವಿಭೂಷಿತಂ ಮೃಗಮದಾಮೋದಾಂಕಿತಂ ಚಂದನಂ . ಜಾತೀಚಂಪಕಬಿಲ್ವಪತ್ರರಚಿತಂ ಪುಷ್ಪಂ ಚ ಧೂಪಂ ತಥಾ ದೀಪಂ ದೇವ ದಯಾನಿಧೇ ಪಶುಪತೇ ಹೃತ್ಕಲ್ಪಿತಂ ಗೃಹ್ಯತಾಂ .. 1.. ರತ್ನಗಳಿಂದ ಅಲಂಕೃತವಾದ ಆಸನವನ್ನು ನಿನಗೆ ಅರ್ಪಿಸುವೆನು. ಸ್ನಾನಕ್ಕಾಗಿ ಹಿಮಾಲಯದ ಜಲವನ್ನು, ದಿವ್ಯ ಬಟ್ಟೆಯನ್ನು, ನಾನಾ ರತ್ನಗಳಿಂದ ಅಲಂಕರಿಸಲ್ಪಟ್ಟ , (ದಿವ್ಯ ಬಟ್ಟೆಯನ್ನು ಅರ್ಪಿಸುವೆನು), ಕಸ್ತೂರಿಯನ್ನು ಮತ್ತು ಚಂದನವನ್ನು ಲೇಪಿಸುವೆನು ಮಲ್ಲಿಗೆ, ಸಂಪಿಗೆ, ಬಿಲ್ವ ಪತ್ರೆ ಇತ್ಯಾದಿ ಹೂವುಗಳನ್ನು ಅರ್ಪಿಸುವೆನು. ಧೂಪವನ್ನು ಹಚ್ಚುವೆನು. ದೀಪವನ್ನು ಹಚ್ಚುವೆನು. ಪಶುಪತಿಯೇ, ದಯಾನಿಧಿಯೇ, ನನ್ನ ಹೃದಯದಿಂದ ಕಲ್ಪಿತವಾದ ಇವೆಲ್ಲವುಗಳನ್ನು ದಯವಿಟ್ಟು ಸ್ವೀಕರಿಸು. ಸೌವರ್ಣೇ ನವರತ್ನಖಂಡರಚಿತೇ ಪಾತ್ರೇ ಘೃತಂ ಪಾಯಸಂ ಭಕ್ಷ್ಯಂ ಪಂಚವಿಧಂ ಪಯೋದಧಿಯುತಂ ರಂಭಾಫಲಂ ಪಾನಕಂ . ಶಾಕಾನಾಮಯುತಂ ಜಲಂ ರುಚಿಕರಂ ಕರ್ಪೂರಖಂಡೋಜ್ಜ್ವಲಂ ತಾಂಬೂಲಂ ಮನಸಾ ಮಯಾ ವಿರಚಿತಂ ಭಕ್ತ್ಯಾ ಪ್ರಭೋ ಸ್ವೀಕುರು .. 2.. ಚಿನ್ನದ, ನವರತ್ನಗಳಿಂದ ಅಲಂಕರಿಸಲ್ಪಟ್ಟ ಪಾತ್ರೆಯಲ್ಲಿ ನಾನು ನಿನಗೆ ಘ್ರತವನ್ನು (ತುಪ್ಪವನ್ನು) ಮತ್ತು ಪಾಯಸವನ್ನು ಅರ್ಪಿಸುವೆನು. ಪಯ (ಹಾಲು), ಮೊಸರು ಬಾಳೆಹಣ್ಣನ್ನು ಒಳಗೊಂಡ ಪಂಚವಿಧವಾದ ಭಕ್ಷ್ಯವನ್ನು ಅರ್ಪಿಸುವೆನು. ಹಣ್ಣು ತರಕಾರಿಗಳನ್ನೊಳಗೊಂಡ ರುಚಿಕರವಾದ ಜಲ ಮತ್ತು ಪಾನಕವನ್ನು ನಿನಗ...

ಕಠೋಪನಿಷತ್ - ಪ್ರಥಮಾಧ್ಯಾಯ ಪ್ರಥಮಾ ವಲ್ಲೀ

 ಕಠೋಪನಿಷತ್ ಪ್ರಮುಖ ಉಪನಿಷತ್ತುಗಳಲ್ಲಿ ಒಂದು.  ಈ ಉಪನಿಷತ್ತು ಆತ್ಮ, ಬ್ರಹ್ಮ ಮತ್ತು ಮುಕ್ತಿಯ ಕುರಿತಾಗಿ ನಚಿಕೇತ ಎಂಬ ಬಾಲಕ ಮತ್ತು ಯಮನ ಮಧ್ಯ  ನಡೆಯುವ ಸಂಭಾಷಣೆಯ ರೂಪದಲ್ಲಿದೆ.  ಭಾರತಿಯ ತತ್ವಜ್ಞಾನದ ಕೃತಿಗಳ ಪೈಕಿ ಪ್ರಸಿದ್ಧವಾಗಿರುವ ಈ ಕೃತಿಯನ್ನು ಬಹಳಷ್ಟು ಜನ ಪಾಶ್ಚಾತ್ಯ ವಿದ್ವಾಂಸರೂ ಕೂಡ ಅಧ್ಯಯಸಿದ್ದಾರೆ. ಕ್ರಿ.ಶ. ಹದಿನೇಳನೇ ಶತಮಾನದಲ್ಲಿ ಪರ್ಶಿಯನ್ ಭಾಷೆಗೆ ಅನುವಾದವಾದ ಈ ಕೃತಿ ನಂತರ ಲ್ಯಾಟಿನ್ ಭಾಷೆಯಲ್ಲಿ ಅನುವಾದಗೊಂಡು ಯುರೋಪಿನಲ್ಲೆಲ್ಲ ಹಬ್ಬಿಕೊಂಡಿತು. ಪ್ರಸಿದ್ಧ ಕವಿ ಎಡ್ವಿನ್ ಆರ್ನಾಲ್ಡ್ ಈ ಉಪನಿಷತ್ತನ್ನು ಕಾವ್ಯ ರೂಪದಲ್ಲಿ ಬರೆದರೆ (The secret of Death), ರಾಲ್ಫ್ ವಾಲ್ಡೋ ಎಮರ್ಸನ್ ಈ ಉಪನಿಷತ್ತಿನ ಮೇಲೆ ಇಮ್ಮೊರ್ಟಾಲಿಟಿ ಎಂಬ ಪ್ರಬಂಧವನ್ನು ಬರೆದಿದ್ದಾರೆ.    ಕಠೋಪನಿಷತ್     ಓಂ   .. ಅಥ ಕಠೋಪನಿಷದ್ .. ಓಂ ಸಹ ನಾವವತು . ಸಹ ನೌ ಭುನಕ್ತು . ಸಹವೀರ್ಯಂ ಕರವಾವಹೈ . ತೇಜಸ್ವಿ ನಾವಧೀತಮಸ್ತು . ಮಾ ವಿದ್ವಿಷಾವಹೈ .. ಓಂ ಶಾಂತಿಃ ಶಾಂತಿಃ ಶಾಂತಿಃ ..     ಓಂ , ಜೊತೆಯಲ್ಲಿ ನಾವು ಹೋಗೋಣ. ಜೊತೆಯಲ್ಲಿ ನಾವು ಆನಂದಿಸೋಣ. ಜೊತೆಯಲ್ಲಿ ರಭಸದಿಂದ ವಿದ್ಯಾಭ್ಯಾಸವನ್ನು ಮಾಡೋಣ.  ನಮ್ಮ ವಿದ್ಯೆ ತೇಜೋಮಯವಾಗಲಿ. ದ್ವೇಷಕ್ಕೆ ಕಾರಣವಾಗದಿರಲಿ. ಓಂ ಶಾಂತಿಃ ಶಾಂತಿಃ ಶಾಂತಿಃ ..             Part ...

ಆತ್ಮ ಷಟ್ಕ - ನಿರ್ವಾಣ ಷಟ್ಕ

  ಆತ್ಮಷಟ್ಕಂ   ಮನೋಬುದ್ಧ್ಯಹಂಕಾರಚಿತ್ತಾನಿ ನಾಹಂ  ನ ಚ ಶ್ರೋತ್ರಜಿಹ್ವೇ ನ ಚ ಘ್ರಾಣನೇತ್ರೇ . ನ ಚ ವ್ಯೋಮಭೂಮಿರ್ನ ತೇಜೋ ನ ವಾಯು- ಶ್ಚಿದಾನಂದರೂಪಃ ಶಿವೋಽಹಂ ಶಿವೋಽಹಂ .. 1..   ನ ಚ ಪ್ರಾಣಸಂಜ್ಞೋ ನ ವೈ ಪಂಚವಾಯು ನ  ವಾ ಸಪ್ತಧಾತುರ್ನ ವಾ ಪಂಚಕೋಶಃ . ನ ವಾಕ್ಪಾಣಿಪಾದೌ ನ ಚೋಪಸ್ಥಪಾಯು ಚಿದಾನಂದರೂಪಃ ಶಿವೋಽಹಂ ಶಿವೋಽಹಂ .. 2..     ನ ಮೇ ದ್ವೇಷರಾಗೌ ನ ಮೇ ಲೋಭಮೋಹೌ  ಮದೋ ನೈವ ಮೇ ನೈವ ಮಾತ್ಸರ್ಯಭಾವಃ .  ನ ಧರ್ಮೋ ನ ಚಾರ್ಥೋ ನ ಕಾಮೋ ನ ಮೋಕ್ಷ ಚಿದಾನಂದರೂಪಃ ಶಿವೋಽಹಂ ಶಿವೋಽಹಂ .. 3..   ನ ಪುಣ್ಯಂ ನ ಪಾಪಂ ನ ಸೌಖ್ಯಂ ನ ದುಃಖಂ  ನ ಮಂತ್ರೋ ನ ತೀರ್ಥಂ ನ ವೇದಾ ನ ಯಜ್ಞಾಃ . ಅಹಂ ಭೋಜನಂ ನೈವ ಭೋಜ್ಯಂ ನ ಭೋಕ್ತಾ  ಚಿದಾನಂದರೂಪಃ ಶಿವೋಽಹಂ ಶಿವೋಽಹಂ .. 4.. ನ ಮೃತ್ಯುರ್ನ ಶಂಕಾ ನ ಮೇ ಜಾತಿಭೇದಃ  ಪಿತಾ ನೈವ ಮೇ ನೈವ ಮಾತಾ ನ ಜನ್ಮ . ನ ಬಂಧುರ್ನ ಮಿತ್ರಂ ಗುರುರ್ನೈವ ಶಿಷ್ಯ ಚಿದಾನಂದರೂಪಃ ಶಿವೋಽಹಂ ಶಿವೋಽಹಂ .. 5.. ಅಹಂ ನಿರ್ವಿಕಲ್ಪೋ ನಿರಾಕಾರರೂಪೋ  ವಿಭುರ್ವ್ಯಾಪ್ಯ ಸರ್ವತ್ರ ಸರ್ವೇಂದ್ರಿಯಾಣಾಂ .  ಸದಾ ಮೇ ಸಮತ್ವಂ ನ ಮುಕ್ತಿರ್ನ ಬಂಧ ಚಿದಾನಂದರೂಪಃ ಶಿವೋಽಹಂ ಶಿವೋಽಹಂ .. 6..             .. ಇತಿ ಶ್ರೀಮಚ್ಛಂಕರಾಚಾರ್ಯವಿರಚಿತಂ ಆತ್ಮಷಟ್ಕಂ ಸಂಪೂರ್ಣಂ .....

ಭಜ ಗೋವಿಂದಂ

ಆದಿ ಶಂಕರಾಚಾರ್ಯರು ರಚಿಸಿದ ಈ ಜನಪ್ರಿಯ ಶ್ಲೋಕವನ್ನು ಮೋಹ ಮುದ್ಗರ (ಮುದ್ಗರ - ಸುತ್ತಿಗೆ) ಎಂದೂ ಕರೆಯುತ್ತಾರೆ. ಒಂದು ಕತೆಯ ಪ್ರಕಾರ ಒಂದು ದಿನ ಶಂಕರಾಚಾರ್ಯರು ರಸ್ತೆಯಲ್ಲಿ ಹೋಗುತ್ತಿದ್ದಾಗ ಒಬ್ಬ ವೃದ್ಧನು ವಿದ್ಯಾರ್ಥಿಗಳಿಗೆ ಕಲಿಸಲೆಂದು ವ್ಯಾಕರಣವನ್ನು ಉರು ಹಾಕುತ್ತಿದ್ದ. ಅದನ್ನು ನೋಡಿದ ಶಂಕರಾಚಾರ್ಯರು ಅವನಿಗೆ ಈ ವಯಸ್ಸಿನಲ್ಲಿ ವ್ಯಾಕರಣ ಕಲಿಯುವ ಬದಲು ದೇವರ ಧ್ಯಾನದಲ್ಲಿ ಮನಸ್ಸನ್ನು ತೊಡಗಿಸಲು ಹೇಳಿದರು. ಈ ಸಮಯದಲ್ಲಿಯೇ ಭಜಗೋವಿಂದ ರಚಿಸಿದರು ಎಂಬ ಪ್ರತೀತಿ ಇದೆ.   ಭಜ ಗೋವಿಂದಂ ಭಜ ಗೋವಿಂದಂ ಗೋವಿಂದಂ ಭಜ ಮೂಢಮತೇ . ಸಂಪ್ರಾಪ್ತೇ ಸನ್ನಿಹಿತೇ ಕಾಲೇ ನಹಿ ನಹಿ ರಕ್ಷತಿ ಡುಕೃಂಕರಣೇ .. 1.. ಭಜ - ಭಜಿಸು   ಗೋವಿಂದಂ - ಗೋವಿಂದಂ   ಮೂಢಮತೆ - ಮೂಢಬುದ್ಧಿಯವನೇ   ಸಂಪ್ರಾಪ್ತೇ - ಪ್ರಾಪ್ತವಾದಾಗ   ಸನ್ನಿಹತೇ - ಹತ್ತಿರ ಬಂದಾಗ   ನಹಿ ರಕ್ಷತಿ - ರಕ್ಷಿಸುವದಿಲ್ಲ    ಡುಕೃಂಕರಣೆ - ವ್ಯಾಕರಣ ಜ್ಞಾನ ಮೂಢಮತಿಯೇ, ಗೋವಿಂದನನ್ನು ಭಜಿಸು,  ಗೋವಿಂದನನ್ನು ಭಜಿಸು. ಮರಣ ಕಾಲ ಬಂದಾಗ ನಿನ್ನ ವ್ಯಾಕರಣ ಜ್ಞಾನ  (ಪುಸ್ತಕ ಜ್ಞಾನ) ನಿನ್ನನ್ನು ರಕ್ಷಿಸುವದಿಲ್ಲ.  ಮೂಢ ಜಹೀಹಿ ಧನಾಗಮತೃಷ್ಣಾಂ ಕುರು ಸದ್ಬುದ್ಧಿಂ ಮನಸಿ ವಿತೃಷ್ಣಾಂ . ಯಲ್ಲಭಸೇ ನಿಜಕರ್ಮೋಪಾತ್ತಂ ವಿತ್ತಂ ತೇನ ವಿನೋದಯ ಚಿತ್ತಂ .. 2.. ಜಹೀಹಿ - ತ್ಯಜಿಸು  ಧನ ಆಗಮ - ದುಡ್ಡು ಬರಬೇಕು ...