Posts

ವಿಶ್ವರೂಪದರ್ಶನ ಯೋಗ - ಗೀತಾ ೧೧ನೇ ಅಧ್ಯಾಯ

 ಅಥೈಕಾದಶೋಽಧ್ಯಾಯಃ .   ವಿಶ್ವರೂಪದರ್ಶನಯೋಗಃ         ಅರ್ಜುನ ಉವಾಚ . ಮದನುಗ್ರಹಾಯ ಪರಮಂ ಗುಹ್ಯಮಧ್ಯಾತ್ಮಸಂಜ್ಞಿತಂ . ಯತ್ತ್ವಯೋಕ್ತಂ ವಚಸ್ತೇನ ಮೋಹೋಽಯಂ ವಿಗತೋ ಮಮ .. ೧೧-೧.. ಮತ್+ಅನುಗ್ರಹಾಯ = ನನ್ನ ಅನುಗ್ರಹಕ್ಕಾಗಿ   ಗುಹ್ಯಮ್=ರಹಸ್ಯಮಯವಾದ  ಅಧ್ಯಾತ್ಮ ಸಂಜ್ಞಿತಮ್=ಅಧ್ಯಾತ್ಮವೆಂಬ ಹೆಸರುಳ್ಳ ಯತ್=ಯಾವುದು ತ್ವಯಾ=ನಿನ್ನಿಂದ ಉಕ್ತಂ=ಹೇಳಿದ ವಚಃ=ಮಾತು ತೇನ=ಅದರಿಂದ ಮೋಹ+ಅಯಂ=ಈ ಮೋಹ ವಿಗತ=ಮಾಯವಾಯಿತು ಮಮ=ನನ್ನ ನನ್ನ ಮೇಲೆ ಅನುಗ್ರಹದಿಂದ ನೀನು ಯಾವ ಅಧ್ಯಾತ್ಮದ ಮಾತನ್ನು ಹೇಳಿದೆಯೋ ಅದರಿಂದ ನನ್ನ ಈ ಮೋಹವು ನಾಶವಾಯಿತು. ಭವಾಪ್ಯಯೌ ಹಿ ಭೂತಾನಾಂ ಶ್ರುತೌ ವಿಸ್ತರಶೋ ಮಯಾ . ತ್ವತ್ತಃ ಕಮಲಪತ್ರಾಕ್ಷ ಮಾಹಾತ್ಮ್ಯಮಪಿ ಚಾವ್ಯಯಂ .. ೧೧-೨.. ಭವ=ಸೃಷ್ಟಿ ಅಪ್ಯಯ=ವಿನಾಶ ಹಿ=ನಿಜವಾಗಿ ಭೂತಾನಾಂ=ಜೀವಿಗಳ ಶ್ರುತೌ=ಕೇಳಲ್ಪಟ್ಟ  ವಿಸ್ತರಶೋ=ವಿಸ್ತಾರವಾಗಿ ಮಯಾ=ನನ್ನಿಂದ ತ್ವತ್ತಃ=ನಿನ್ನ ಕಮಲಪತ್ರಾಕ್ಷ=ಕಮಲದ ಎಲೆಯಂತಹ ಕಣ್ಣುಳ್ಳವನು - ಕೃಷ್ಣ ಮಾಹಾತ್ಮ್ಯಂ=ಮಹಾತ್ಮೆಯನ್ನು ಅಪಿ=ಸಹ ಚ=ಹಾಗೂ ಅವ್ಯಯಂ=ಅವ್ಯಯವಾದ  ಹೇ ಕಮಲಪತ್ರಾಕ್ಷನೇ, ಜೀವಿಗಳ ಉತ್ಪತ್ತಿ ಹಾಗೂ ಲಯಗಳ ಬಗ್ಗೆ ಹಾಗೂ ನಿನ್ನ ಮಹಾತ್ಮೆಯನ್ನು ಸಹ ವಿಸ್ತಾರವಾಗಿ ನಾನು ಕೇಳಿದೆನು.  ಏವಮೇತದ್ಯಥಾತ್ಥ  ತ್ವಮಾತ್ಮಾನಂ ಪರಮೇಶ್ವರ . ದ್ರಷ್ಟುಮಿಚ್ಛಾಮಿ ತೇ ರೂಪಮೈಶ್ವರಂ ಪುರುಷೋತ್ತಮ .. ೧೧-೩.. ...

ಭಗವದ್ಗೀತಾ ಆರತಿ

ನಮ್ಮ ಧರ್ಮದ ಯಾವುದಾದರೂ ಕೃತಿ ಅತಿ ಪ್ರಸಿದ್ಧವಾಗಿದೆ ಎಂದರೆ ಅದು ಭಗವದ್ಗೀತೆ. ಬಹಳ ಕ್ಲಿಷ್ಟವಲ್ಲದ ಭಾಷೆಯಲ್ಲಿ ಜನ-ಸಾಮಾನ್ಯರೂ ಅರಿಯಬಲ್ಲಾದ ತತ್ವಜ್ಞಾನವನ್ನು ತಿಳಿಸಿಹೇಳಿ ಮನುಜರ ಮನಸ್ಸನ್ನು ಪ್ರಶಾಂತಗೊಳಿಸುವ ಕೃತಿ ಇದು. ಆದರೆ ಒಂದು ಸಮಸ್ಯೆಯೆಂದರೆ ಭಗವದ್ಗೀತೆ ಇರುವದು ಸಂಸ್ಖೃತದಲ್ಲಿ - ಅದೂ ಪದ್ಯ ರೂಪದಲ್ಲಿ - ಸ್ವಲ್ಪ ಕಷ್ಟ. ನಮ್ಮ ತಾಯಿ ಅವರ ಸೋದರತ್ತೆಯಿಂದ ಕಲಿತ ಗೀತೆಯ ಕನ್ನಡಾನುವಾದ - ಸಂಕ್ಷಿಪ್ತ ಅನುವಾದ - ಅದೂ ಆರತಿಯ ಪದ್ಯ ರೂಪದಲ್ಲಿರುವ ಅನುವಾದ ಮೊನ್ನೆ ಕೇಳಿದೆ. ಬಹಳ ಇಷ್ಟವಾಯಿತು. ನಿಮಗೆ ಹೇಗೆನಿಸುತ್ತದೆ ನೋಡಿ. ---------------------------------------------------------------------  ಧನ್ಯನಾದೆನು ಕೇಳಿ ನಿನ್ನಿಂದ |  ಮನದೊಳಗೆ ನಿಂದ| ಮೋಹವಡಗಿತು ಹರಿಯೆ ಭರದಿಂದ|| ಜ್ಞಾನದಿಂ ಭೂತಗಳ ಸೃಷ್ಟಿ | ಪ್ರಳಯ ನಿನ್ನಿಂದೆಂಬುದರಿತೆನು| ವಿಶ್ವರೂಪವ ನಿನ್ನದನು| ತೋರೆಂದ ಪಾರ್ಥಗೆ ತೋರಿದಾತನಿ||  ಗಾರತಿಯ ನಾನೆತ್ತಿ ಬೇಡುವೆನು| ಶ್ರೀ ಹರಿಯೆ ವರವನು| ನೀಡು ನೀ ನಿನಗಿಷ್ಟವಾದುದನು||೧||   ನೋಡಲಾಗದು ನರನೆ ನಿನ್ನಿಂದ| ಈ ಕಣ್ಣಿನಿಂದ| ನನ್ನ ರೂಪವ ನಿನ್ನ ಮುನ್ನಿಂದ|| ದಿವ್ಯ ನೇತ್ರವ ಕೊಡುವೆ ನೀ| ನೋಡೆನ್ನನೆಂದವಗಿತ್ತು ತೋರುವ| ವಿಶ್ವರೂಪವ ಧರಿಸಿ ನಾನಾ ರೂಪದಿಂ ಮುನ್ನಿಂದ ಮಾಧವ|| ಗಾರತಿಯ ನಾನೆತ್ತಿ ಬೇಡುವೆನು||೨||   ನೋಡು ನೀನೆಂದೆನುತ ಗೋವಿಂದ | ಬಹುರೂಪದಿಂದ...

ಮುಂಡಕ ಉಪನಿಷತ್ತು

Image
  ಪರಿಚಯ  ಮುಖ್ಯ ಉಪನಿಷತ್ತುಗಳಲ್ಲಿ ಒಂದಾದ ಈ ಉಪನಿಷತ್ತು ಅಥರ್ವವೇದದಲ್ಲಿ ಕಂಡುಬರುತ್ತದೆ. ಇದು ಪದ್ಯ ಉಪನಿಷತ್ತು - ಕಾವ್ಯ ರೂಪದಲ್ಲಿದೆ.  ಅತಿ ಹೆಚ್ಚು ಅನುವಾದಗೊಂಡಿರುವ ಉಪನಿಷತ್ತಾಗಿದೆ.   ಇದು ಋಷಿ ಅಂಗೀರಸ ಹಾಗೂ ಗೃಹಸ್ಥನಾದ ಶೌನಕರ ನಡುವಿನ ಸಂವಾದದ ರೂಪದಲ್ಲಿದೆ.    ಮುಂಡಕ ಶಬ್ದದ ಅರ್ಥ ತಲೆಯ ಕೂದಲನ್ನು ಪೂರ್ತಿ ಕ್ಷೌರ ಮಾಡಿ ತೆಗೆಯುವದು - ತಲೆಯನ್ನು ಬೋಳಿಸುವದು ಎಂಬ ಅರ್ಥ. ಉಪನಿಷತ್ತಿಗೆ ಈ ಹೆಸರು ಕೊಡಲು ಸಂಭಾವ್ಯ ಕಾರಣಗಳು   ಈ ಉಪನಿಷತ್ತು ಸನ್ಯಾಸಿಗಳಿಗಾಗಿ ಬರೆಯಲ್ಪಟ್ಟಿದೆ. ಇದು ನಮ್ಮ ಅಜ್ಞಾನವನ್ನು ಮುಂಡನ ಮಾಡುತ್ತದೆ. ಮುಂಡಕ ಎಂದರೆ ತಲೆ ಎಂಬ ಅರ್ಥವೂ ಆಗಬಹುದು - ಇದು ಎಲ್ಲ ಜ್ಞಾನಗಳಲ್ಲಿ ಪ್ರಮುಖವಾಗಿದೆ ಎಂಬ ಅರ್ಥವೂ ಆಗಬಹುದು.  ಇದರಲ್ಲಿ ಮೂರು ಮುಂಡಕಗಳಿವೆ (ವಿಭಾಗಗಳು).  ಮೊದಲನೆಯ ಮುಂಡಕ ಶ್ರೇಷ್ಠ ಹಾಗೂ ಕನಿಷ್ಠ ವಿದ್ಯೆಗಳನ್ನು ವಿವರಿಸುತ್ತದೆ - ಹಾಗೂ ಅಪರ ವಿದ್ಯೆಯ ವ್ಯರ್ಥತೆಯನ್ನು ಮಂಡಿಸುತ್ತದೆ.  ಎರಡನೆಯ ಮುಂಡಕ ಆತ್ಮ ಹಾಗೂ ಬ್ರಹ್ಮ ನ ಸ್ವರೂಪವನ್ನು, ಬ್ರಹ್ಮ ಹಾಗೂ ಬಾಹ್ಯ ಪ್ರಪಂಚದ ಸಂಬಂಧವನ್ನು ಹಾಗೂ ಬ್ರಹ್ಮ ಜ್ಞಾನವನ್ನು ಪಡೆಯುವ ವಿಧಾನವನ್ನು ವಿವರಿಸುತ್ತದೆ.  ಮೂರನೆಯ ಮುಂಡಕ ಈ ವಿವರಣೆಯನ್ನು ಮುಂದುವರಿಸುತ್ತದೆ.   ಸತ್ಯಮೇವ ಜಯತೇ - ಸತ್ಯವೇ ಜಯಿಸುತ್ತದೆ - ನಾವೆಲ್ಲ ಬಹಳ ಕೇಳಿರುವ ಈ ನುಡಿ ಮುಂಡಕ ಉಪನಿಷತ್...

ಮಾಂಡೂಕ್ಯ ಉಪನಿಷತ್ತು

Image
ಮಾಂಡೂಕ್ಯ ಉಪನಿಷತ್ ಅತಿ ಚಿಕ್ಕದಾದರೂ ಮುಖ್ಯ ಉಪನಿಷತ್ತುಗಳಲ್ಲಿ ಒಂದಾಗಿದೆ. ಇದು ಕೇವಲ ೧೨ ಶ್ಲೋಕಗಳನ್ನು ಹೊಂದಿದೆ. ಅಥರ್ವ ವೇದದ ಭಾಗವಾದ ಈ ಉಪನಿಷತ್ತಿನ ರಚನೆ ಕ್ರಿ. ಪೂ. ೫ನೇ ಮತ್ತು ೨ನೇ ಶತಮಾನಗಳ ಮಧ್ಯೆ ಆಗಿರಬಹುದು ಎಂದು ಹೇಳಲಾಗುತ್ತದೆ.  ಇದರ ಭಾಷ್ಯವನ್ನು ಶಂಕರಾಚರ್ಯರ ಗುರುವಿನ ಗುರುವಾದ ಗೌಡಪಾದರು ಮಾಂಡೂಕ್ಯ ಕಾರಿಕ ಎಂಬ ಕೃತಿಯ ಜೊತೆಗೆ ಬರೆದಿದ್ದಾರೆ. ಈ ಉಪನಿಷತ್ತು ನಮ್ಮ ಪ್ರಜ್ಞೆಯ ನಾಲ್ಕು ಅವಸ್ಥೆಗಳನ್ನು ವಿವರಿಸುತ್ತದೆ - ಅವು ಜಾಗೃತ, ಸ್ವಪ್ನ, ಸುಷುಪ್ತ ಹಾಗೂ ತುರೀಯ. ತುರೀಯ ಅವಸ್ಥೆ ಮೊದಲ ಮೂರೂ ಅವಸ್ಥೆಗಳ ಹೊರತಾಗಿದೆ, ಬ್ರಹ್ಮತ್ವದ ಅವಸ್ಥೆಯಾಗಿದೆ. ಓಂ ಎನ್ನುವ ಶಬ್ದ ಈ ನಾಲ್ಕೂ ಅವಸ್ಥೆಗಳನ್ನೂ ಆವರಿಸಿದೆ ಹಾಗೂ ಈ ಬ್ರಹ್ಮಾಂಡವನ್ನು ಆವರಿಸಿದೆ.  ಈ ಉಪನಿಷತ್ತಿನ ಮೇಲೆ ಬೌದ್ಧ ಧರ್ಮದ ಪ್ರಭಾವವಿದೆ ಎಂದೂ ಹೇಳಲಾಗುತ್ತದೆ.    ತುರೀಯ - ಚತುರ್ಥೀಯ ಅವಸ್ಥೆ ಓಂ ಈ ಶಬ್ದವು ಮೂರು ವರ್ಣಗಳ ಸಂಯುಕ್ತ ಅಕ್ಷರವಾಗಿದೆ - ಅ, ಉ ಹಾಗೂ ಮ್ . ಅದರಲ್ಲಿ ಅ ಅಕ್ಷರವು ಜಾಗೃತ ಅವಸ್ಥೆಯನ್ನು ಬಿಂಬಿಸುತ್ತದೆ.  ಜಾಗೃತದಲ್ಲಿ ಪ್ರಜ್ಞೆಯು ಬಾಹ್ಯ ಜಗತ್ತಿನ ಕಡೆಗೆ ತಿರುಗಿರುತ್ತದೆ. ಉ ಅಕ್ಷರವು ಸ್ವಪ್ನ ಅವಸ್ಥೆಯನ್ನು ಬಿಂಬಿಸುತ್ತದೆ. ಸ್ವಪ್ನ ಅವಸ್ಥೆಯಲ್ಲಿ ಪ್ರಜ್ಞೆಯು ಅಂತರ್ಮುಖಿ ಆಗಿರುತ್ತದೆ.  ಮ ಅಕ್ಷರವು ಬಿಂಬಿಸುವ ಮೂರನೆ ಅವಸ್ಥೆಯಾದ ಗಾಢ ನಿದ್ರೆ ಅಥವಾ ಸುಷುಪ್ತಿಯಲ್ಲಿ ಯಾವು...

ಕೇನ ಉಪನಿಷತ್ತು

Image
ಕೇನ ಉಪನಿಷತ್ತು ಪ್ರಮುಖ  ಉಪನಿಷತ್ತುಗಳಲ್ಲಿ ಒಂದಾಗಿದೆ. ಸಾಮವೇದದ ತಲವಕಾರ ಬ್ರಾಹ್ಮಣದ ಭಾಗವಾದ ಈ ಉಪನಿಷತ್ತನ್ನು ತಲವಕಾರ ಉಪನಿಷತ್ತು ಎಂದೂ ಹೇಳುತ್ತಾರೆ.   ಈ ಉಪನಿಷತ್ತು ಕ್ರಿ.ಪೂ. ೬ನೇ ಶತಮಾನದ ಪೂರ್ವದಲ್ಲಿ ರಚಿತವಾದ ಈಶಾವಾಸ್ಯ, ತೈತ್ತರೀಯ, ಬ್ರಹದಾರಣ್ಯಕ ಉಪನಿಷತ್ತುಗಳ ನಂತರ ರಚಿತವಾಗಿರಬೇಕು.   ಕೆಲ ವಿದ್ವಾಂಸರ ಪ್ರಕಾರ ಗದ್ಯ ಉಪನಿಷತ್ತುಗಳು ಹಾಗೂ ಪದ್ಯ ಉಪನಿಷತ್ತುಗಳ ನಡುವಿನ ಕೊಂಡಿ ಇದಾಗಿದೆ.   ಹೆಸರು:  ಈ ಉಪನಿಷತ್ತಿನ ಮೊದಲ ಶ್ಲೋಕ ಕೇನ (ಯಾರಿಂದ) ಎಂಬ ಪದದಿಂದ ಆರಂಭವಾಗುವದರಿಂದ, ಇದಕ್ಕೆ  ಕೇನ ಉಪನಿಷತ್ತು  ಎಂಬ  ಹೆಸರು ಬಂದಿದೆ.  ನಾವು ಯಾವ ಧರ್ಮ, ಯಾವ ಪಂಥದವರಾಗಿದ್ದರೂ ನಮ್ಮ ಮನಸ್ಸಿನಲ್ಲಿ ಒಮ್ಮೆಯೆಲ್ಲಾ ಒಮ್ಮೆ ಈ ಪ್ರಶ್ನೆ ಕಾಡುತ್ತದೆ - ಯಾರು ಈ ಜಗವನ್ನು ನಿಯಂತ್ರಿಸುತ್ತಿದ್ದಾರೆ? ಯಾರ ನಿಯಮಗಳ ಅನುಸಾರ ಈ ವಿಶ್ವ ಚಲಿಸುತ್ತಿದೆ?   ನಮ್ಮಲ್ಲಿ ಕೆಲವರು ಎಲ್ಲಾ ಆ ಭಗವಂತನ ಮಾಯೆ ಎಂದು ಕೈ ಮುಗಿಯಬಹುದು. ಇನ್ನು ಹಲವರು ಹೂಂ, ಯಾರೋ ಇದ್ದಾರೆ, ನಮ್ಮನ್ನೆಲ್ಲಾ ಕುಳಿತಲ್ಲಿಂದಲೇ ಸೂತ್ರದ ಗೊಂಬೆಯಂತೆ ಆಡಿಸುತ್ತಿದ್ದಾರೆ ಎಂದು ಯೋಚಿಸಬಹುದು.   ನಮ್ಮಲ್ಲೆರನ್ನು ಕಾಡುವ ಈ ಪ್ರಶ್ನೆಯನ್ನೇ ಕೇನೋಪನಿಷತ್ತಲ್ಲಿ ಕೇಳಲಾಗಿದೆ ಹಾಗೂ ಅದಕ್ಕೆ ಉತ್ತರವನ್ನೂ ಹೇಳಲಾಗಿದೆ. ಭಾಗಗಳು  ಈ ಉಪನಿಷತ್ತನ್ನು ನಾಲ್ಕು ಖಂಡಗಳಾಗಿ ವಿಭಜ...

ಆತ್ಮ ಬೋಧ

ಆತ್ಮಬೋಧ ಎಂಬುದು ಅದ್ವೈತ ವೇದಾಂತದ ಒಂದು ಸಣ್ಣ ಸಂಸ್ಕೃತ ಪಠ್ಯವಾಗಿದೆ. ಅರವತ್ತೆಂಟು ಶ್ಲೋಕಗಳಲ್ಲಿರುವ ಈ ಪಠ್ಯವು ಆತ್ಮ ಜ್ಞಾನದ ಮಾರ್ಗ ಅಥವಾ ಆತ್ಮದ ಅರಿವನ್ನು ವಿವರಿಸುತ್ತದೆ.   ಈ ಪಠ್ಯವನ್ನು ಶಂಕರರು ತಮ್ಮ ಶಿಷ್ಯ ಸನಂದನ, ಪದ್ಮಪಾದ ಎಂಬವವರಿಗಾಗಿ ಬರೆದಿದ್ದಾರೆ ಎಂದು ಹೇಳಲಾಗುತ್ತದೆ.   ಆತ್ಮ-ಬೋಧವು ಒಂದು ಪ್ರಕರಣ ಗ್ರಂಥ.  ಪ್ರಕರಣ ಗ್ರಂಥ ಅಂದರೆ  ಯಾವುದೇ ಮೂಲ ತತ್ವವನ್ನು ನೀಡುವ ಕೃತಿ ಅಲ್ಲ ಆದರೆ  ಧರ್ಮಶಾಸ್ತ್ರಗಳಲ್ಲಿ ಬಳಸಲಾಗುವ ಪದಗಳು ಮತ್ತು ಪರಿಭಾಷೆಗಳನ್ನು ವಿವರಿಸುವ ಸಾಹಿತ್ಯ .     ..ಆತ್ಮಬೋಧಃ.. ತಪೋಭಿಃ ಕ್ಷೀಣಪಾಪಾನಾಂ ಶಾಂತಾನಾಂ ವೀತರಾಗಿಣಾಂ. ಮುಮುಕ್ಷೂಣಾಮಪೇಕ್ಷ್ಯೋಽಯಮಾತ್ಮಬೋಧೋ ವಿಧೀಯತೇ..1.. ಈ ಮೊದಲನೆಯ ಶ್ಲೋಕದಲ್ಲಿ ಲೇಖಕರು ಈ ಕೃತಿಯು ಯಾರ ಕುರಿತಾಗಿ, ಯಾರಿಗಾಗಿ ರಚಿಸಲ್ಪಟ್ಟಿದೆ ಎಂದು ಹೇಳುತ್ತಾರೆ  ತಪಸ್ಸನ್ನು ಮಾಡಿ ಯಾರ ಪಾಪವು ಕ್ಷೀಣಿಸಿದೆಯೋ, ಯಾರು ಶಾಂತಚಿತ್ತರೋ, ಯಾರು ರಾಗ-ದ್ವೇಷಗಳಿಂದ ಮುಕ್ತರೋ, ಯಾರು ಮುಮುಕ್ಷವೋ ( ಮೋಕ್ಷವನ್ನು ಪಡೆಯಲು ತೀವ್ರ ಆಸೆ ಹೊಂದಿದ್ದಾರೋ), ಅವರಿಗಾಗಿ ನಾನು ಆತ್ಮಬೋಧವನ್ನು ರಚಿಸುತ್ತಿದ್ದೇನೆ.  (ವೇದಾಂತದ ಪ್ರಕಾರ ವೇದ-ಶಾಸ್ತ್ರಗಳನ್ನು ಓದುವ ವ್ಯಕ್ತಿಗೆ ಆತ್ಮಸಾಕ್ಷಾತ್ಕಾರವಾಗುವದು ಅವನಿಗೆ ವಿವೇಕ,ವೈರಾಗ್ಯ, ಶಮಾದಿ ಷಟ್ ಸಂಪತ್ತಿಗಳು ಹಾಗೂ ಮುಮುಕ್ಷತ್ವ ಇವು ಇದ್ದರೆ ಮಾತ್ರ)  ಬೋಧೋಽನ...