Posts

ಕೇನ ಉಪನಿಷತ್ತು

ಕೇನ ಉಪನಿಷತ್ತು ಮುಖ್ ಯ ಉಪನಿಷತ್ತುಗಳಲ್ಲಿ ಒಂದಾಗಿದೆ. ಸಾಮವೇದದ ತಲವಕಾರ ಬ್ರಾಹ್ಮಣದಲ್ಲಿ ಸೇರಿದ ಈ ಉಪನಿಷತ್ತನ್ನು ತಲವಕಾರ ಉಪನಿಷತ್ತು ಎಂದೂ ಹೇಳುತ್ತಾರೆ.   ಈ ಉಪನಿಷತ್ತು ಕ್ರಿ.ಪೂ. ೬ನೇ ಶತಮಾನದ ಪೂರ್ವದಲ್ಲಿ ರಚಿತವಾದ ಈಶಾವಾಸ್ಯ, ತೈತ್ತರೀಯ, ಬ್ರಹದಾರಣ್ಯಕ ಉಪನಿಷತ್ತುಗಳ ನಂತರ ರಚಿತವಾಗಿರಬೇಕು.   ಕೆಲ ವಿದ್ವಾಂಸರ ಪ್ರಕಾರ ಗದ್ಯ ಉಪನಿಷತ್ತುಗಳು ಹಾಗೂ ಪದ್ಯ ಉಪನಿಷತ್ತುಗಳ ನಡುವಿನ ಕೊಂಡಿ ಇದಾಗಿದೆ.   ಹೆಸರು:  ಈ ಉಪನಿಷತ್ತಿನ ಮೊದಲ ಶ್ಲೋಕ ಕೇನ ಎಂಬ ಪದದಿಂದ ಆರಂಭವಾಗುವದರಿಂದ, ಇದಕ್ಕೆ  ಕೇನ ಉಪನಿಷತ್ತು  ಎಂಬ  ಹೆಸರು ಬಂದಿದೆ. ಕೇನ ಎಂದರೆ "ಯಾರಿಂದ" ಅಥವಾ "ಯಾವುದರಿಂದ" ಎಂಬ ಅರ್ಥ ಬರುತ್ತದೆ. ಯಾರಿಂದ ಈ ಮನಸ್ಸು ವಿಚಾರಗಳನ್ನು ಮಾಡುತ್ತದೆ. ಯಾರು ಈ ಜಗತ್ತನ್ನು ಸೂತ್ರಧಾರನಾಗಿ ಆಟವಾಡಿಸುತ್ತಾರೆ ಎಂಬ ಪ್ರಶ್ನೆಗಳನ್ನು ಉಪನಿಷತ್ತು ಉತ್ತರಿಸುತ್ತದೆ.  ಭಾಗಗಳು  ಈ ಉಪನಿಷತ್ತನ್ನು ನಾಲ್ಕು ಖಂಡಗಳಾಗಿ ವಿಭಜಿಸಲಾಗಿದೆ. ಮೊದಲ ಖಂಡದಲ್ಲಿ ಎಂಟು ಶ್ಲೋಕಗಳಿವೆ. ಎರಡನೆಯ ಖಂಡದಲ್ಲಿ ಐದು ಶ್ಲೋಕಗಳಿವೆ. ಮೂರು ಮತ್ತು ನಾಲ್ಕನೆಯ ಖಂಡಗಳು ಗದ್ಯ ರೂಪದಲ್ಲಿದ್ದು, ಮೂರನೆಯ ಖಂಡದಲ್ಲಿ ೧೨ ಮತ್ತು ನಾಲ್ಕನೆಯ ಖಂಡದಲ್ಲಿ ೯ ಪ್ಯಾರಾಗಳಿವೆ.    ಮೂರನೇ ಖಂಡ ಒಂದು ಕತೆಯನ್ನು ಹೇಳುತ್ತದೆ - ಆದರೆ ಈ ಕತೆಯಲ್ಲಿ ಹಲವು ನಿಗೂಢ ಅರ್ಥಗಳು ಸೇರಿವೆ - ...

ಆತ್ಮ ಬೋಧ

ಆತ್ಮಬೋಧ ಎಂಬುದು ಅದ್ವೈತ ವೇದಾಂತದ ಒಂದು ಸಣ್ಣ ಸಂಸ್ಕೃತ ಪಠ್ಯವಾಗಿದೆ. ಅರವತ್ತೆಂಟು ಶ್ಲೋಕಗಳಲ್ಲಿರುವ ಈ ಪಠ್ಯವು ಆತ್ಮ ಜ್ಞಾನದ ಮಾರ್ಗ ಅಥವಾ ಆತ್ಮದ ಅರಿವನ್ನು ವಿವರಿಸುತ್ತದೆ.   ಈ ಪಠ್ಯವನ್ನು ಶಂಕರರು ತಮ್ಮ ಶಿಷ್ಯ ಸನಂದನ, ಪದ್ಮಪಾದ ಎಂಬವವರಿಗಾಗಿ ಬರೆದಿದ್ದಾರೆ ಎಂದು ಹೇಳಲಾಗುತ್ತದೆ.   ಆತ್ಮ-ಬೋಧವು ಒಂದು ಪ್ರಕರಣ ಗ್ರಂಥ.  ಪ್ರಕರಣ ಗ್ರಂಥ ಅಂದರೆ  ಯಾವುದೇ ಮೂಲ ತತ್ವವನ್ನು ನೀಡುವ ಕೃತಿ ಅಲ್ಲ ಆದರೆ  ಧರ್ಮಶಾಸ್ತ್ರಗಳಲ್ಲಿ ಬಳಸಲಾಗುವ ಪದಗಳು ಮತ್ತು ಪರಿಭಾಷೆಗಳನ್ನು ವಿವರಿಸುವ ಸಾಹಿತ್ಯ .     ..ಆತ್ಮಬೋಧಃ.. ತಪೋಭಿಃ ಕ್ಷೀಣಪಾಪಾನಾಂ ಶಾಂತಾನಾಂ ವೀತರಾಗಿಣಾಂ. ಮುಮುಕ್ಷೂಣಾಮಪೇಕ್ಷ್ಯೋಽಯಮಾತ್ಮಬೋಧೋ ವಿಧೀಯತೇ..1.. ಈ ಮೊದಲನೆಯ ಶ್ಲೋಕದಲ್ಲಿ ಲೇಖಕರು ಈ ಕೃತಿಯು ಯಾರ ಕುರಿತಾಗಿ, ಯಾರಿಗಾಗಿ ರಚಿಸಲ್ಪಟ್ಟಿದೆ ಎಂದು ಹೇಳುತ್ತಾರೆ  ತಪಸ್ಸನ್ನು ಮಾಡಿ ಯಾರ ಪಾಪವು ಕ್ಷೀಣಿಸಿದೆಯೋ, ಯಾರು ಶಾಂತಚಿತ್ತರೋ, ಯಾರು ರಾಗ-ದ್ವೇಷಗಳಿಂದ ಮುಕ್ತರೋ, ಯಾರು ಮುಮುಕ್ಷವೋ ( ಮೋಕ್ಷವನ್ನು ಪಡೆಯಲು ತೀವ್ರ ಆಸೆ ಹೊಂದಿದ್ದಾರೋ), ಅವರಿಗಾಗಿ ನಾನು ಆತ್ಮಬೋಧವನ್ನು ರಚಿಸುತ್ತಿದ್ದೇನೆ.  (ವೇದಾಂತದ ಪ್ರಕಾರ ವೇದ-ಶಾಸ್ತ್ರಗಳನ್ನು ಓದುವ ವ್ಯಕ್ತಿಗೆ ಆತ್ಮಸಾಕ್ಷಾತ್ಕಾರವಾಗುವದು ಅವನಿಗೆ ವಿವೇಕ,ವೈರಾಗ್ಯ, ಶಮಾದಿ ಷಟ್ ಸಂಪತ್ತಿಗಳು ಹಾಗೂ ಮುಮುಕ್ಷತ್ವ ಇವು ಇದ್ದರೆ ಮಾತ್ರ)  ಬೋಧೋಽನ...

ವಾಕ್ಯ ವೃತ್ತಿ

    ಪರಿಚಯ:  ವಾಕ್ಯ ವೃತ್ತಿಯು ಒಂದು ವೇದಾಂತದ  ಸಣ್ಣ ಗ್ರಂಥವಾಗಿದ್ದು, ಎರಡು ಮಹಾವಾಕ್ಯಗಳಾದ  "ಅಹಂ ಬ್ರಹ್ಮಾಸ್ಮಿ "ಮತ್ತು "ತತ್ ತ್ವಮ್ ಅಸಿ "ಗಳ   ವಿಸ್ತಾರವಾದ  ವಿವರಣೆಯನ್ನು ಹೊಂದಿದೆ.    ಪ್ರತಿಯೊಂದು ಮಂತ್ರವನ್ನು ಗುರುವು ಶಿಷ್ಯನಿಗೆ ವಿವರಿಸುವಂತೆ ಸ್ಪಷ್ಟವಾಗಿ ವಿವರಿಸುವದನ್ನು ವೃತ್ತಿ ಎಂದು ಕರೆಯಲಾಗುತ್ತದೆ.   ಈ ಪಠ್ಯದ ಬಗ್ಗೆ ಬಹಳ ಪುರಾತನವಾದ ವ್ಯಾಖ್ಯಾನವು ಲಭ್ಯವಿದ್ದರೂ, ಇದರ ಲೇಖಕರ ಯಾರೆಂದು ನಿಖರವಾಗಿ ತಿಳಿದಿಲ್ಲ. ಈ ಕೃತಿಯ ಕುರಿತು ಸ್ವಾಮಿ ಚಿನ್ಮಯಾನಂದ ಅವರ ವ್ಯಾಖ್ಯಾನವನ್ನು 1981 ರಲ್ಲಿ ಪ್ರಕಟಿಸಲಾಯಿತು.  ವಾಕ್ಯ ವೃತ್ತಿಯು ಆದಿ ಶಂಕರರಿಂದ ರಚಿತವಾಗಿದೆ ಎಂದು ಹೇಳಲಾಗಿದೆ ಹಾಗೂ ಐವತ್ತೆರಡು ಶ್ಲೋಕಗಳನ್ನು ಹೊಂದಿದೆ.   ಇದು ಕುತೂಹಲಿಯಾದ ವಿದ್ಯಾರ್ಥಿಮತ್ತು ಜ್ಞಾನಿಯಾದ ಶಿಕ್ಷಕರ ನಡುವಿನ ಸಂಭಾಷಣೆಯ ರೂಪದಲ್ಲಿದೆ.  ಇದರಲ್ಲಿ ಒಬ್ಬ ವಿದ್ಯಾರ್ಥಿಯು ತನ್ನ ಗುರುಗಳ ಬಳಿ ಹೋಗಿ ಮಹಾವಾಕ್ಯವು(ತತ್ವಮಸಿ) ತನಗೆ ಸರಿಯಾಗಿ ತಿಳಿಯಲಿಲ್ಲ  ಎಂದು ಒಪ್ಪಿಕೊಳ್ಳುತ್ತಾನೆ ಮತ್ತು ಆಗ ಅವನ ಗುರುವು ತಾಳ್ಮೆಯಿಂದ ಈ ಮಹತ್ವದ ವಾಕ್ಯದಲ್ಲಿ ಬಳಸಲಾದ ಪದಗಳ ಮೂಲಕ ಅದರ ಅರ್ಥವನ್ನು ಸ್ಪಷ್ಟಪಡಿಸುತ್ತಾನೆ.  (ಆಧಾರ : ವಿಕಿಪೀಡಿಯಾ)

ಮನೀಷ ಪಂಚಕಂ

ಮನೀಷ ಪಂಚಕವನ್ನು ಬರೆದವರು ಜಗದ್ಗುರು ಆದಿ ಶಂಕರಾಚಾರ್ಯರು.  ಶ್ರೀ ಶಂಕರರು ತಮ್ಮ ಬ್ರಹ್ಮ ಸೂತ್ರದ ವ್ಯಾಖ್ಯಾನ (ಭಾಷ್ಯ)ದಲ್ಲಿ ವೇದಗಳ ಪಠಣವನ್ನು ಮೇಲ್ಜಾತಿಗಳಿಗೆ ಮಾತ್ರ ಸೀಮಿತಗೊಳಿಸಿದ್ದಾರೆ ಎಂದು ಜಾತೀವಾದವನ್ನು ಪ್ರತಿಪಾದಿಸಿದ್ದಕ್ಕಾಗಿ ಪಾಶ್ಚಿಮಾತ್ಯ ವಿದ್ವಾಂಸರು ಅವರನ್ನು ಟೀಕಿಸುತ್ತಾದರೆ. ಆದಾರೂ ಭಾಷ್ಯ ಬರೆಯುವವರು, ಒಂದು ಪಠ್ಯಕ್ಕೆ ವ್ಯಾಖ್ಯಾನ ಬರೆಯುವಾಗ ಅದರ ಮೂಲ ಅರ್ಥಕ್ಕೆ ಸೀಮಿತರಾಗಿರಬೇಕಾಗುತ್ತದೆ ಎಂಬುದನ್ನು ಗಮನಿಸಬೇಕು.  ಉಪದೇಶಸಹಸ್ರಿ ಮತ್ತು ಸಣ್ಣ ಕೃತಿಯಾದ ಈ ಮನೀಶ ಪಂಚಕದಂತಹ ಸ್ವತಂತ್ರ ರಚನೆಗಳಲ್ಲಿ ಅವರು ತಮ್ಮ ಅದ್ವೈತ ಸಿದ್ಧಾಂತವನ್ನು ಸಕಲ ವೈಭವದೊಂದಿಗೆ ವಿವರಿಸುತ್ತಾರೆ. ಅದ್ವೈತ ಸಿದ್ಧಾಂತವು ಜಾತಿ, ಮತ, ಧರ್ಮ, ಲಿಂಗಗಳ  ವ್ಯತ್ಯಾಸಗಳನ್ನು ಗುರುತಿಸುವುದಿಲ್ಲ - ಏಕೆಂದರೆ ನಾವೆಲ್ಲರೂ ಒಬ್ಬನೇ ಬ್ರಹ್ಮನ ಬೇರೆ ಬೇರೆ ರೂಪಗಳು. ಈ ಕೃತಿಯ ಸನ್ನಿವೇಶವು ಭಾರತದ ಪವಿತ್ರ ಕ್ಷೇತ್ರವಾದ ವಾರಣಾಸಿಯಲ್ಲಿ  ನಡೆದಿದೆ. ಅದ್ವೈತ ಶಾಸ್ತ್ರದ ಪ್ರತಿಪಾದಕರಾದ ಆದಿ ಶಂಕರಾಚಾರ್ಯರು ಸ್ನಾನ ಮುಗಿಸಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಇದ್ದಕ್ಕಿದ್ದಂತೆ ದಾರಿಯಲ್ಲಿ ಒಬ್ಬ ಚಂಡಾಲನನ್ನು ನೋಡಿ, ಆ ದಿನಗಳಲ್ಲಿನ  ಪದ್ಧತಿಯ ಪ್ರಕಾರ ದೂರವನ್ನು ಕಾಯ್ದುಕೊಳ್ಳಲು ಸನ್ನೆ ಮಾಡಿದರು. ಆ ಚಂಡಾಲ ಭಗವಾನ್ ಶಂಕರ(ಶಿವ)ನೇ ಹೊರತು ಬೇರಾರೂ ಅಲ್ಲ! ಹಾಗೆ ಸನ್ನೆ ಮಾಡಿದಾಗ, ಶಿವನು ತನ್ನ ಭಕ್ತ ಶಂಕಾರಾಚ...

ಶಿವಾನಂದಲಹರಿ

  ಶ್ರೀ ಶಿವಾನಂದಲಹರಿ ಕಲಾಭ್ಯಾಂ ಚೂಡಾಲಂಕೃತಶಶಿಕಲಾಭ್ಯಾಂ ನಿಜತಪಃ-      ಫಲಾಭ್ಯಾಂ ಭಕ್ತೇಷು ಪ್ರಕಟಿತಫಲಾಭ್ಯಾಂ ಭವತು ಮೇ . ಶಿವಾಭ್ಯಾಮಸ್ತೋಕತ್ರಿಭುವನಶಿವಾಭ್ಯಾಂ ಹೃದಿ ಪುನ-      ರ್ಭವಾಭ್ಯಾಮಾನಂದಸ್ಫುರದನುಭವಾಭ್ಯಾಂ ನತಿರಿಯಂ .. ೧.. ಕಲೆಯ ಸಾಕಾರ ರೂಪರಾದ, ಚಂದ್ರನಿಂದ ಅಲಂಕರಿಸಲ್ಪಟ್ಟ ಶಿರವನ್ನು ಹೊಂದಿರುವ, ಪರಸ್ಪರ ತಪಸ್ಸಿನ ಫಲಗಳಾದ, ಭಕ್ತರಲ್ಲಿ ಔದಾರ್ಯವನ್ನು ಪ್ರದರ್ಶಿಸುವ, ಮೂರು ಲೋಕಗಳಿಗೆ ಸಮೃದ್ಧವಾಗಿ ಶುಭಕರವಾದ, ನನ್ನ ಹೃದಯದಲ್ಲಿ ಪದೇ ಪದೇ ಕಾಣಿಸಿಕೊಳ್ಳುವ ಮತ್ತು ಉಕ್ಕಿ ಹರಿಯುವ ಆನಂದವನ್ನು ಅನುಭವಿಸುವ ಶಿವನಿಗೆ ನನ್ನ ನಮಸ್ಕಾರಗಳು. ಗಲಂತೀ ಶಂಭೋ ತ್ವಚ್ಚರಿತಸರಿತಃ ಕಿಲ್ಬಿಷರಜೋ      ದಲಂತೀ ಧೀಕುಲ್ಯಾಸರಣಿಷು ಪತಂತೀ ವಿಜಯತಾಂ . ದಿಶಂತೀ ಸಂಸಾರಭ್ರಮಣಪರಿತಾಪೋಪಶಮನಂ      ವಸಂತೀ ಮಚ್ಚೇತೋಹ್ರದಭುವಿ ಶಿವಾನಂದಲಹರೀ .. ೨.. ಓ ಶಂಭು, ನಿನ್ನ ಜೀವನದ ನದಿಯಿಂದ ಹೊರಹೊಮ್ಮುವ, ಪಾಪದ ಧೂಳನ್ನು ನಾಶಮಾಡುವ, ಬುದ್ಧಿಶಕ್ತಿಯ ಹೊಳೆಗಳ ಹಾದಿಗಳಲ್ಲಿ ಬೀಳುವ, ಲೌಕಿಕ ಜೀವನದ ವೃತ್ತದಲ್ಲಿ ಅಲೆದಾಡುವ ಯಾತನೆಯನ್ನು ಕಡಿಮೆ ಮಾಡುವ ಮತ್ತು ನನ್ನ ಹೃದಯದಲ್ಲಿ ನೆಲೆಸಿರುವ ಶಿವನ ಆನಂದದ ಅಲೆಯು ವಿಜಯಶಾಲಿಯಾಗಲಿ. ತ್ರಯೀವೇದ್ಯಂ ಹೃದ್ಯಂ ತ್ರಿಪುರಹರಮಾದ್ಯಂ ತ್ರಿನಯನಂ      ಜಟಾಭಾರೋದಾರಂ ಚಲದುರಗಹ...