Posts

ಭಗವದ್ಗೀತಾ ಆರತಿ

ನಮ್ಮ ಧರ್ಮದ ಯಾವುದಾದರೂ ಕೃತಿ ಅತಿ ಪ್ರಸಿದ್ಧವಾಗಿದೆ ಎಂದರೆ ಅದು ಭಗವದ್ಗೀತೆ. ಬಹಳ ಕ್ಲಿಷ್ಟವಲ್ಲದ ಭಾಷೆಯಲ್ಲಿ ಜನ-ಸಾಮಾನ್ಯರೂ ಅರಿಯಬಲ್ಲಾದ ತತ್ವಜ್ಞಾನವನ್ನು ತಿಳಿಸಿಹೇಳಿ ಮನುಜರ ಮನಸ್ಸನ್ನು ಪ್ರಶಾಂತಗೊಳಿಸುವ ಕೃತಿ ಇದು. ಆದರೆ ಒಂದು ಸಮಸ್ಯೆಯೆಂದರೆ ಭಗವದ್ಗೀತೆ ಇರುವದು ಸಂಸ್ಖೃತದಲ್ಲಿ - ಅದೂ ಪದ್ಯ ರೂಪದಲ್ಲಿ - ಸ್ವಲ್ಪ ಕಷ್ಟ. ನಮ್ಮ ತಾಯಿ ಅವರ ಸೋದರತ್ತೆಯಿಂದ ಕಲಿತ ಗೀತೆಯ ಕನ್ನಡಾನುವಾದ - ಸಂಕ್ಷಿಪ್ತ ಅನುವಾದ - ಅದೂ ಆರತಿಯ ಪದ್ಯ ರೂಪದಲ್ಲಿರುವ ಅನುವಾದ ಮೊನ್ನೆ ಕೇಳಿದೆ. ಬಹಳ ಇಷ್ಟವಾಯಿತು. ನಿಮಗೆ ಹೇಗೆನಿಸುತ್ತದೆ ನೋಡಿ. ---------------------------------------------------------------------  ಧನ್ಯನಾದೆನು ಕೇಳಿ ನಿನ್ನಿಂದ |  ಮನದೊಳಗೆ ನಿಂದ| ಮೋಹವಡಗಿತು ಹರಿಯೆ ಭರದಿಂದ|| ಜ್ಞಾನದಿಂ ಭೂತಗಳ ಸೃಷ್ಟಿ | ಪ್ರಳಯ ನಿನ್ನಿಂದೆಂಬುದರಿತೆನು| ವಿಶ್ವರೂಪವ ನಿನ್ನದನು| ತೋರೆಂದ ಪಾರ್ಥಗೆ ತೋರಿದಾತನಿ||  ಗಾರತಿಯ ನಾನೆತ್ತಿ ಬೇಡುವೆನು| ಶ್ರೀ ಹರಿಯೆ ವರವನು| ನೀಡು ನೀ ನಿನಗಿಷ್ಟವಾದುದನು||೧||   ನೋಡಲಾಗದು ನರನೆ ನಿನ್ನಿಂದ| ಈ ಕಣ್ಣಿನಿಂದ| ನನ್ನ ರೂಪವ ನಿನ್ನ ಮುನ್ನಿಂದ|| ದಿವ್ಯ ನೇತ್ರವ ಕೊಡುವೆ ನೀ| ನೋಡೆನ್ನನೆಂದವಗಿತ್ತು ತೋರುವ| ವಿಶ್ವರೂಪವ ಧರಿಸಿ ನಾನಾ ರೂಪದಿಂ ಮುನ್ನಿಂದ ಮಾಧವ|| ಗಾರತಿಯ ನಾನೆತ್ತಿ ಬೇಡುವೆನು||೨||   ನೋಡು ನೀನೆಂದೆನುತ ಗೋವಿಂದ | ಬಹುರೂಪದಿಂದ...

ಮುಂಡಕ ಉಪನಿಷತ್ತು

Image
  ಪರಿಚಯ  ಮುಖ್ಯ ಉಪನಿಷತ್ತುಗಳಲ್ಲಿ ಒಂದಾದ ಮುಂಡಕ ಉಪನಿಷತ್ತು ಅಥರ್ವವೇದದಲ್ಲಿ ಕಂಡುಬರುತ್ತದೆ. ಕಾವ್ಯ ರೂಪದಲ್ಲಿರುವ ಪ್ರಸಿದ್ಧವಾದ ಇದು ಅತಿ ಹೆಚ್ಚು ಅನುವಾದಗೊಂಡಿರುವ ಉಪನಿಷತ್ತಾಗಿದೆ.   ಇದು ಋಷಿ ಅಂಗೀರಸ ಹಾಗೂ ಗೃಹಸ್ಥನಾದ ಶೌನಕರ ನಡುವಿನ ಸಂವಾದದ ರೂಪದಲ್ಲಿದೆ.    ಇದರಲ್ಲಿ ಮೂರು ಮುಂಡಕಗಳಿವೆ (ವಿಭಾಗಗಳು). ಮೊದಲನೆಯ ಮುಂಡಕ ಶ್ರೇಷ್ಠ ಹಾಗೂ ಕನಿಷ್ಠ ವಿದ್ಯೆಗಳನ್ನು ವಿವರಿಸುತ್ತದೆ - ಹಾಗೂ ಅಪರ ವಿದ್ಯೆಯ ವ್ಯರ್ಥತೆಯನ್ನು ಮಂಡಿಸುತ್ತದೆ. ಎರಡನೆಯ ಮುಂಡಕ ಆತ್ಮ ಹಾಗೂ ಬ್ರಹ್ಮ ನ ಸ್ವರೂಪವನ್ನು, ಬ್ರಹ್ಮ ಹಾಗೂ ಬಾಹ್ಯ ಪ್ರಪಂಚದ ಸಂಬಂಧವನ್ನು ಹಾಗೂ ಬ್ರಹ್ಮ ಜ್ಞಾನವನ್ನು ಪಡೆಯುವ ವಿಧಾನವನ್ನು ವಿವರಿಸುತ್ತದೆ. ಮೂರನೆಯ ಮುಂಡಕ ಈ ವಿವರಣೆಯನ್ನು ಮುಂದುವರಿಸುತ್ತದೆ.   ಸತ್ಯಮೇವ ಜಯತೇ - ಸತ್ಯವೇ ಜಯಿಸುತ್ತದೆ - ಈ ನುಡಿ ಮುಂಡಕ ಉಪನಿಷತ್ತಿನ ಭಾಗವಾಗಿದೆ. ನಮ್ಮ ದೇಶದ ರಾಷ್ಟ್ರೀಯ ಲಾಂಛನದಲ್ಲಿ ಈ ನುಡಿಯು ಕಂಡು ಬರುತ್ತದೆ.    ಕರ್ತೃ : ಬೇರೆಲ್ಲ ವೇದ ಹಾಗೂ ಉಪನಿಷತ್ತುಗಳಂತೆ ಮುಂಡಕ ಉಪನಿಷತ್ತನ್ನು ರಚನೆ ಮಾಡಿದವರು ಯಾರೆಂಬುದು ನಮಗೆ ತಿಳಿದಿಲ್ಲ . ಆದರೆ ಅದರಲ್ಲೇ ಹೇಳಿರುವ ಪ್ರಕಾರ ಬ್ರಹ್ಮನು ಈ ಕೃತಿಯನ್ನು ತನ್ನ ಹಿರಿಯ ಮಗ ಅಥರ್ವನಿಗೆ, ಅಥರ್ವನು ಅಂಗೀರನಿಗೆ, ಅಂಗೀರನು ಸತ್ಯವಾಹನಿಗೆ, ಸತ್ಯವಾಹನು ಆಂಗೀರಸನಿಗೆ ಹೇಳಿಕೊಟ್ಟನು.    ಶಂಕರಾಚಾರ್ಯರು ಈ ಉಪನಿಷತ್ತ...

ಮಾಂಡೂಕ್ಯ ಉಪನಿಷತ್ತು

Image
ಮಾಂಡೂಕ್ಯ ಉಪನಿಷತ್ ಅತಿ ಚಿಕ್ಕದಾದರೂ ಈ ಉಪನಿಷತ್ತು ಮುಖ್ಯ ಉಪನಿಷತ್ತುಗಳಲ್ಲಿ ಒಂದಾಗಿದೆ. ಇದು ಕೇವಲ ೧೨ ಶ್ಲೋಕಗಳನ್ನು ಹೊಂದಿದೆ. ಇದರ ರಚನೆ ಕ್ರಿ. ಪೂ. ೫ನೇ ಮತ್ತು ೨ನೇ ಶತಮಾನಗಳ ಮಧ್ಯೆ ಆಗಿರಬಹುದು ಎಂದು ಹೇಳಲಾಗುತ್ತದೆ.  ಇದರ ಭಾಷ್ಯವನ್ನು ಶಂಕರಾಚರ್ಯರ ಗುರುವಿನ ಗುರುವಾದ ಗರುಡಪಾದರು ಮಾಂಡೂಕ್ಯ ಕಾರಿಕ ಎಂಬ ಕೃತಿಯ ಜೊತೆಗೆ ಬರೆದಿದ್ದಾರೆ. ಈ ಉಪನಿಷತ್ತು ನಮ್ಮ ಪ್ರಜ್ಞೆಯ ನಾಲ್ಕು ಅವಸ್ಥೆಗಳನ್ನು ವಿವರಿಸುತ್ತದೆ - ಜಾಗೃತ, ಸ್ವಪ್ನ, ಸುಷುಪ್ತ ಹಾಗೂ ತುರೀಯ. ತುರೀಯ ಅವಸ್ಥೆ ಮೂರೂ ಅವಸ್ಥೆಗಳ ಹೊರತಾಗಿದೆ, ಬ್ರಹ್ಮತ್ವದ ಅವಸ್ಥೆಯಾಗಿದೆ.  ಓಂ ಎನ್ನುವ ಶಬ್ದ ಈ ನಾಲ್ಕೂ ಅವಸ್ಥಗಳನ್ನೂ ಆವರಿಸಿದೆ ಹಾಗೂ ಈ ಬ್ರಹ್ಮಾಂಡವನ್ನು ಆವರಿಸಿದೆ ಎಂಬ ಮಾತನ್ನು ಪ್ರತಿಪಾದಿಸುತ್ತದೆ.   ಈ ಉಪನಿಷತ್ತಿನ ಮೇಲೆ ಬೌದ್ಧ ಧರ್ಮದ ಪ್ರಭಾವವಿದೆ ಎಂದು ಹೇಳಲಾಗುತ್ತದೆ.    ತುರೀಯ - ಚತುರ್ಥೀಯ ಅವಸ್ಥೆ  ಓಂ ಶಬ್ದವು ಮೂರು ವರ್ಣಗಳ ಸಂಯುಕ್ತ ಅಕ್ಷರವಾಗಿದೆ - ಅದರಲ್ಲಿ ಅ ಅಕ್ಷರವು ಜಾಗೃತ ಅವಸ್ಥೆಯನ್ನು ಬಿಂಬಿಸುತ್ತದೆ. ಉ ಅಕ್ಷರವು ಸ್ವಪ್ನ ಅವಸ್ಥೆಯನ್ನು ಬಿಂಬಿಸುತ್ತದೆ. ಜಾಗೃತದಲ್ಲಿ ಪ್ರಜ್ಞೆಯು ಬಾಹ್ಯ ಜಗತ್ತಿನ ಕಡೆಗೆ ತಿರುಗಿರುತ್ತವೆ. ಸ್ವಪ್ನ ಅವಸ್ಥೆಯಲ್ಲಿ ಅವು ಅಂತರ್ಮುಖಿ ಆಗರುತ್ತವೆ. ಮೂರನೆ ಅವಸ್ಥೆಯಾದ ಗಾಢ ನಿದ್ರೆ ಅಥವಾ ಸುಷುಪ್ತಿಯಲ್ಲಿ ಯಾವುದೇ ಚಟುವಟಿಕೆಗಳಿಲ್ಲದೆ  ಪ್ರಜ್ಞೆಯು ...

ಕೇನ ಉಪನಿಷತ್ತು

ಕೇನ ಉಪನಿಷತ್ತು ಪ್ರಮುಖ  ಉಪನಿಷತ್ತುಗಳಲ್ಲಿ ಒಂದಾಗಿದೆ. ಸಾಮವೇದದ ತಲವಕಾರ ಬ್ರಾಹ್ಮಣದಲ್ಲಿ ಸೇರಿದ ಈ ಉಪನಿಷತ್ತನ್ನು ತಲವಕಾರ ಉಪನಿಷತ್ತು ಎಂದೂ ಹೇಳುತ್ತಾರೆ.   ಈ ಉಪನಿಷತ್ತು ಕ್ರಿ.ಪೂ. ೬ನೇ ಶತಮಾನದ ಪೂರ್ವದಲ್ಲಿ ರಚಿತವಾದ ಈಶಾವಾಸ್ಯ, ತೈತ್ತರೀಯ, ಬ್ರಹದಾರಣ್ಯಕ ಉಪನಿಷತ್ತುಗಳ ನಂತರ ರಚಿತವಾಗಿರಬೇಕು.   ಕೆಲ ವಿದ್ವಾಂಸರ ಪ್ರಕಾರ ಗದ್ಯ ಉಪನಿಷತ್ತುಗಳು ಹಾಗೂ ಪದ್ಯ ಉಪನಿಷತ್ತುಗಳ ನಡುವಿನ ಕೊಂಡಿ ಇದಾಗಿದೆ.   ಹೆಸರು:  ಈ ಉಪನಿಷತ್ತಿನ ಮೊದಲ ಶ್ಲೋಕ ಕೇನ (ಯಾರಿಂದ) ಎಂಬ ಪದದಿಂದ ಆರಂಭವಾಗುವದರಿಂದ, ಇದಕ್ಕೆ  ಕೇನ ಉಪನಿಷತ್ತು  ಎಂಬ  ಹೆಸರು ಬಂದಿದೆ. ಕೇನ ಎಂದರೆ "ಯಾರಿಂದ" ಅಥವಾ "ಯಾವುದರಿಂದ" ಎಂಬ ಅರ್ಥ ಬರುತ್ತದೆ. ಯಾರಿಂದ ಈ ಮನಸ್ಸು ವಿಚಾರಗಳನ್ನು ಮಾಡುತ್ತದೆ. ಯಾರು ಈ ಜಗತ್ತನ್ನು ಸೂತ್ರಧಾರನಾಗಿ ಆಟವಾಡಿಸುತ್ತಾರೆ ಎಂಬ ಪ್ರಶ್ನೆಗಳನ್ನು ಉಪನಿಷತ್ತು ಉತ್ತರಿಸುತ್ತದೆ.  ಭಾಗಗಳು  ಈ ಉಪನಿಷತ್ತನ್ನು ನಾಲ್ಕು ಖಂಡಗಳಾಗಿ ವಿಭಜಿಸಲಾಗಿದೆ. ಮೊದಲ ಖಂಡದಲ್ಲಿ ಎಂಟು ಶ್ಲೋಕಗಳಿವೆ. ಎರಡನೆಯ ಖಂಡದಲ್ಲಿ ಐದು ಶ್ಲೋಕಗಳಿವೆ. ಮೂರು ಮತ್ತು ನಾಲ್ಕನೆಯ ಖಂಡಗಳು ಗದ್ಯ ರೂಪದಲ್ಲಿದ್ದು, ಮೂರನೆಯ ಖಂಡದಲ್ಲಿ ೧೨ ಮತ್ತು ನಾಲ್ಕನೆಯ ಖಂಡದಲ್ಲಿ ೯ ಪ್ಯಾರಾಗಳಿವೆ.    ಮೂರನೇ ಖಂಡ ಒಂದು ಕತೆಯನ್ನು ಹೇಳುತ್ತದೆ -  ಒಮ್ಮೆ ದೇವತೆಗಳು ಯುದ್ಧ ಮಾಡಿದಾ...

ಆತ್ಮ ಬೋಧ

ಆತ್ಮಬೋಧ ಎಂಬುದು ಅದ್ವೈತ ವೇದಾಂತದ ಒಂದು ಸಣ್ಣ ಸಂಸ್ಕೃತ ಪಠ್ಯವಾಗಿದೆ. ಅರವತ್ತೆಂಟು ಶ್ಲೋಕಗಳಲ್ಲಿರುವ ಈ ಪಠ್ಯವು ಆತ್ಮ ಜ್ಞಾನದ ಮಾರ್ಗ ಅಥವಾ ಆತ್ಮದ ಅರಿವನ್ನು ವಿವರಿಸುತ್ತದೆ.   ಈ ಪಠ್ಯವನ್ನು ಶಂಕರರು ತಮ್ಮ ಶಿಷ್ಯ ಸನಂದನ, ಪದ್ಮಪಾದ ಎಂಬವವರಿಗಾಗಿ ಬರೆದಿದ್ದಾರೆ ಎಂದು ಹೇಳಲಾಗುತ್ತದೆ.   ಆತ್ಮ-ಬೋಧವು ಒಂದು ಪ್ರಕರಣ ಗ್ರಂಥ.  ಪ್ರಕರಣ ಗ್ರಂಥ ಅಂದರೆ  ಯಾವುದೇ ಮೂಲ ತತ್ವವನ್ನು ನೀಡುವ ಕೃತಿ ಅಲ್ಲ ಆದರೆ  ಧರ್ಮಶಾಸ್ತ್ರಗಳಲ್ಲಿ ಬಳಸಲಾಗುವ ಪದಗಳು ಮತ್ತು ಪರಿಭಾಷೆಗಳನ್ನು ವಿವರಿಸುವ ಸಾಹಿತ್ಯ .     ..ಆತ್ಮಬೋಧಃ.. ತಪೋಭಿಃ ಕ್ಷೀಣಪಾಪಾನಾಂ ಶಾಂತಾನಾಂ ವೀತರಾಗಿಣಾಂ. ಮುಮುಕ್ಷೂಣಾಮಪೇಕ್ಷ್ಯೋಽಯಮಾತ್ಮಬೋಧೋ ವಿಧೀಯತೇ..1.. ಈ ಮೊದಲನೆಯ ಶ್ಲೋಕದಲ್ಲಿ ಲೇಖಕರು ಈ ಕೃತಿಯು ಯಾರ ಕುರಿತಾಗಿ, ಯಾರಿಗಾಗಿ ರಚಿಸಲ್ಪಟ್ಟಿದೆ ಎಂದು ಹೇಳುತ್ತಾರೆ  ತಪಸ್ಸನ್ನು ಮಾಡಿ ಯಾರ ಪಾಪವು ಕ್ಷೀಣಿಸಿದೆಯೋ, ಯಾರು ಶಾಂತಚಿತ್ತರೋ, ಯಾರು ರಾಗ-ದ್ವೇಷಗಳಿಂದ ಮುಕ್ತರೋ, ಯಾರು ಮುಮುಕ್ಷವೋ ( ಮೋಕ್ಷವನ್ನು ಪಡೆಯಲು ತೀವ್ರ ಆಸೆ ಹೊಂದಿದ್ದಾರೋ), ಅವರಿಗಾಗಿ ನಾನು ಆತ್ಮಬೋಧವನ್ನು ರಚಿಸುತ್ತಿದ್ದೇನೆ.  (ವೇದಾಂತದ ಪ್ರಕಾರ ವೇದ-ಶಾಸ್ತ್ರಗಳನ್ನು ಓದುವ ವ್ಯಕ್ತಿಗೆ ಆತ್ಮಸಾಕ್ಷಾತ್ಕಾರವಾಗುವದು ಅವನಿಗೆ ವಿವೇಕ,ವೈರಾಗ್ಯ, ಶಮಾದಿ ಷಟ್ ಸಂಪತ್ತಿಗಳು ಹಾಗೂ ಮುಮುಕ್ಷತ್ವ ಇವು ಇದ್ದರೆ ಮಾತ್ರ)  ಬೋಧೋಽನ...

ವಾಕ್ಯ ವೃತ್ತಿ

    ಪರಿಚಯ:  ವಾಕ್ಯ ವೃತ್ತಿಯು ಒಂದು ವೇದಾಂತದ  ಸಣ್ಣ ಗ್ರಂಥವಾಗಿದ್ದು, ಎರಡು ಮಹಾವಾಕ್ಯಗಳಾದ  "ಅಹಂ ಬ್ರಹ್ಮಾಸ್ಮಿ "ಮತ್ತು "ತತ್ ತ್ವಮ್ ಅಸಿ "ಗಳ   ವಿಸ್ತಾರವಾದ  ವಿವರಣೆಯನ್ನು ಹೊಂದಿದೆ.    ಪ್ರತಿಯೊಂದು ಮಂತ್ರವನ್ನು ಗುರುವು ಶಿಷ್ಯನಿಗೆ ವಿವರಿಸುವಂತೆ ಸ್ಪಷ್ಟವಾಗಿ ವಿವರಿಸುವದನ್ನು ವೃತ್ತಿ ಎಂದು ಕರೆಯಲಾಗುತ್ತದೆ.   ಈ ಪಠ್ಯದ ಬಗ್ಗೆ ಬಹಳ ಪುರಾತನವಾದ ವ್ಯಾಖ್ಯಾನವು ಲಭ್ಯವಿದ್ದರೂ, ಇದರ ಲೇಖಕರ ಯಾರೆಂದು ನಿಖರವಾಗಿ ತಿಳಿದಿಲ್ಲ. ಈ ಕೃತಿಯ ಕುರಿತು ಸ್ವಾಮಿ ಚಿನ್ಮಯಾನಂದ ಅವರ ವ್ಯಾಖ್ಯಾನವನ್ನು 1981 ರಲ್ಲಿ ಪ್ರಕಟಿಸಲಾಯಿತು.  ವಾಕ್ಯ ವೃತ್ತಿಯು ಆದಿ ಶಂಕರರಿಂದ ರಚಿತವಾಗಿದೆ ಎಂದು ಹೇಳಲಾಗಿದೆ ಹಾಗೂ ಐವತ್ತೆರಡು ಶ್ಲೋಕಗಳನ್ನು ಹೊಂದಿದೆ.   ಇದು ಕುತೂಹಲಿಯಾದ ವಿದ್ಯಾರ್ಥಿಮತ್ತು ಜ್ಞಾನಿಯಾದ ಶಿಕ್ಷಕರ ನಡುವಿನ ಸಂಭಾಷಣೆಯ ರೂಪದಲ್ಲಿದೆ.  ಇದರಲ್ಲಿ ಒಬ್ಬ ವಿದ್ಯಾರ್ಥಿಯು ತನ್ನ ಗುರುಗಳ ಬಳಿ ಹೋಗಿ ಮಹಾವಾಕ್ಯವು(ತತ್ವಮಸಿ) ತನಗೆ ಸರಿಯಾಗಿ ತಿಳಿಯಲಿಲ್ಲ  ಎಂದು ಒಪ್ಪಿಕೊಳ್ಳುತ್ತಾನೆ ಮತ್ತು ಆಗ ಅವನ ಗುರುವು ತಾಳ್ಮೆಯಿಂದ ಈ ಮಹತ್ವದ ವಾಕ್ಯದಲ್ಲಿ ಬಳಸಲಾದ ಪದಗಳ ಮೂಲಕ ಅದರ ಅರ್ಥವನ್ನು ಸ್ಪಷ್ಟಪಡಿಸುತ್ತಾನೆ.  (ಆಧಾರ : ವಿಕಿಪೀಡಿಯಾ)

ಮನೀಷ ಪಂಚಕಂ

ಮನೀಷ ಪಂಚಕವನ್ನು ಬರೆದವರು ಜಗದ್ಗುರು ಆದಿ ಶಂಕರಾಚಾರ್ಯರು.  ಶ್ರೀ ಶಂಕರರು ತಮ್ಮ ಬ್ರಹ್ಮ ಸೂತ್ರದ ವ್ಯಾಖ್ಯಾನ (ಭಾಷ್ಯ)ದಲ್ಲಿ ವೇದಗಳ ಪಠಣವನ್ನು ಮೇಲ್ಜಾತಿಗಳಿಗೆ ಮಾತ್ರ ಸೀಮಿತಗೊಳಿಸಿದ್ದಾರೆ ಎಂದು ಜಾತೀವಾದವನ್ನು ಪ್ರತಿಪಾದಿಸಿದ್ದಕ್ಕಾಗಿ ಪಾಶ್ಚಿಮಾತ್ಯ ವಿದ್ವಾಂಸರು ಅವರನ್ನು ಟೀಕಿಸುತ್ತಾದರೆ. ಆದಾರೂ ಭಾಷ್ಯ ಬರೆಯುವವರು, ಒಂದು ಪಠ್ಯಕ್ಕೆ ವ್ಯಾಖ್ಯಾನ ಬರೆಯುವಾಗ ಅದರ ಮೂಲ ಅರ್ಥಕ್ಕೆ ಸೀಮಿತರಾಗಿರಬೇಕಾಗುತ್ತದೆ ಎಂಬುದನ್ನು ಗಮನಿಸಬೇಕು.  ಉಪದೇಶಸಹಸ್ರಿ ಮತ್ತು ಸಣ್ಣ ಕೃತಿಯಾದ ಈ ಮನೀಶ ಪಂಚಕದಂತಹ ಸ್ವತಂತ್ರ ರಚನೆಗಳಲ್ಲಿ ಅವರು ತಮ್ಮ ಅದ್ವೈತ ಸಿದ್ಧಾಂತವನ್ನು ಸಕಲ ವೈಭವದೊಂದಿಗೆ ವಿವರಿಸುತ್ತಾರೆ. ಅದ್ವೈತ ಸಿದ್ಧಾಂತವು ಜಾತಿ, ಮತ, ಧರ್ಮ, ಲಿಂಗಗಳ  ವ್ಯತ್ಯಾಸಗಳನ್ನು ಗುರುತಿಸುವುದಿಲ್ಲ - ಏಕೆಂದರೆ ನಾವೆಲ್ಲರೂ ಒಬ್ಬನೇ ಬ್ರಹ್ಮನ ಬೇರೆ ಬೇರೆ ರೂಪಗಳು. ಈ ಕೃತಿಯ ಸನ್ನಿವೇಶವು ಭಾರತದ ಪವಿತ್ರ ಕ್ಷೇತ್ರವಾದ ವಾರಣಾಸಿಯಲ್ಲಿ  ನಡೆದಿದೆ. ಅದ್ವೈತ ಶಾಸ್ತ್ರದ ಪ್ರತಿಪಾದಕರಾದ ಆದಿ ಶಂಕರಾಚಾರ್ಯರು ಸ್ನಾನ ಮುಗಿಸಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಇದ್ದಕ್ಕಿದ್ದಂತೆ ದಾರಿಯಲ್ಲಿ ಒಬ್ಬ ಚಂಡಾಲನನ್ನು ನೋಡಿ, ಆ ದಿನಗಳಲ್ಲಿನ  ಪದ್ಧತಿಯ ಪ್ರಕಾರ ದೂರವನ್ನು ಕಾಯ್ದುಕೊಳ್ಳಲು ಸನ್ನೆ ಮಾಡಿದರು. ಆ ಚಂಡಾಲ ಭಗವಾನ್ ಶಂಕರ(ಶಿವ)ನೇ ಹೊರತು ಬೇರಾರೂ ಅಲ್ಲ! ಹಾಗೆ ಸನ್ನೆ ಮಾಡಿದಾಗ, ಶಿವನು ತನ್ನ ಭಕ್ತ ಶಂಕಾರಾಚ...